ಬಂಧ ಮುಕ್ತವಾಗಿಸು ಇಂದು
ಸೂತ್ರದ ಗೊಂಬೆಯೇನು ನಾನು?
ನನಗೂ ಮನಸೆಂಬುದಿಲ್ಲವೇನು?
ತವರಿನಟ್ಟದಲಿ ಕನಸೆಲ್ಲ ಕಟ್ಟಿಟ್ಟು
ನಿನ್ನೆಡೆಗೆ ಬಂದೆನು ಅಡಿಯನಿಟ್ಟು
ಕಣ್ಣಂಚ ಕಂಬನಿ ಅಲ್ಲಲ್ಲೇ ಒರೆಸಿ
ಬಾರದ ನಗುವ ತುಟಿಯೊಳಿರಿಸಿ
ನೀ ಕುಣಿಸಿದಂತೆ ಕುಣಿದೆನು ನಲ್ಲ
ಥೈ ಥೈ ತಕ ಥೈ…
ಕುಣಿವ ಹೆಜ್ಜೆಯು ಸೋತಿಹುದು
ತೊಟ್ಟ ಗೆಜ್ಜೆಯೂ ಸವೆದಿಹುದು
ಬಿಡುಗಡೆ ಬಯಸಿದೆ ಕಣ ಕಣವು
ಮುಗಿದಿದೆ ದೊರೆ ನಮ್ಮಋಣವು
ಬಹುಕಾಲ ಬಾಳಿದೆನು ನೆರಳಾಗಿ
ತುಸುಕಾಲ ಬಾಳಲೇ ನನಗಾಗಿ?
ಮಾತಿಂದ ನೀ ಎನ್ನ ಜರಿಯದಿರು
ಕಣ್ಣಿಂದಲೇ ಇರಿದೆನ್ನ ಕೊಲ್ಲದಿರು
ಕಳುಹು ಬಾರ ಬಾಗಿಲಿಗೆ ಬಂದು.
ಬಂಧ ಮುಕ್ತವಾಗಿಸು ನೀ ಇಂದು.
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ
- ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ