ಕವನ

Team Newsnap
0 Min Read
poetry ಕವನ

ಬಂಧ ಮುಕ್ತವಾಗಿಸು ಇಂದು

WhatsApp Image 2023 05 27 at 4.52.11 PM
ಜಾನಕಿ ರಾವ್

ಸೂತ್ರದ ಗೊಂಬೆಯೇನು ನಾನು?
ನನಗೂ ಮನಸೆಂಬುದಿಲ್ಲವೇನು?

ತವರಿನಟ್ಟದಲಿ ಕನಸೆಲ್ಲ ಕಟ್ಟಿಟ್ಟು
ನಿನ್ನೆಡೆಗೆ ಬಂದೆನು ಅಡಿಯನಿಟ್ಟು

ಕಣ್ಣಂಚ ಕಂಬನಿ ಅಲ್ಲಲ್ಲೇ ಒರೆಸಿ
ಬಾರದ ನಗುವ ತುಟಿಯೊಳಿರಿಸಿ

ನೀ ಕುಣಿಸಿದಂತೆ ಕುಣಿದೆನು ನಲ್ಲ
ಥೈ ಥೈ ತಕ ಥೈ…

ಕುಣಿವ ಹೆಜ್ಜೆಯು ಸೋತಿಹುದು
ತೊಟ್ಟ ಗೆಜ್ಜೆಯೂ ಸವೆದಿಹುದು

ಬಿಡುಗಡೆ ಬಯಸಿದೆ ಕಣ ಕಣವು
ಮುಗಿದಿದೆ ದೊರೆ ನಮ್ಮಋಣವು

ಬಹುಕಾಲ ಬಾಳಿದೆನು ನೆರಳಾಗಿ
ತುಸುಕಾಲ ಬಾಳಲೇ ನನಗಾಗಿ?

ಮಾತಿಂದ ನೀ ಎನ್ನ ಜರಿಯದಿರು
ಕಣ್ಣಿಂದಲೇ ಇರಿದೆನ್ನ ಕೊಲ್ಲದಿರು

ಕಳುಹು ಬಾರ ಬಾಗಿಲಿಗೆ ಬಂದು.
ಬಂಧ ಮುಕ್ತವಾಗಿಸು ನೀ ಇಂದು.

Share This Article
Leave a comment