ಬಂಧ ಮುಕ್ತವಾಗಿಸು ಇಂದು

ಸೂತ್ರದ ಗೊಂಬೆಯೇನು ನಾನು?
ನನಗೂ ಮನಸೆಂಬುದಿಲ್ಲವೇನು?
ತವರಿನಟ್ಟದಲಿ ಕನಸೆಲ್ಲ ಕಟ್ಟಿಟ್ಟು
ನಿನ್ನೆಡೆಗೆ ಬಂದೆನು ಅಡಿಯನಿಟ್ಟು
ಕಣ್ಣಂಚ ಕಂಬನಿ ಅಲ್ಲಲ್ಲೇ ಒರೆಸಿ
ಬಾರದ ನಗುವ ತುಟಿಯೊಳಿರಿಸಿ
ನೀ ಕುಣಿಸಿದಂತೆ ಕುಣಿದೆನು ನಲ್ಲ
ಥೈ ಥೈ ತಕ ಥೈ…
ಕುಣಿವ ಹೆಜ್ಜೆಯು ಸೋತಿಹುದು
ತೊಟ್ಟ ಗೆಜ್ಜೆಯೂ ಸವೆದಿಹುದು
ಬಿಡುಗಡೆ ಬಯಸಿದೆ ಕಣ ಕಣವು
ಮುಗಿದಿದೆ ದೊರೆ ನಮ್ಮಋಣವು
ಬಹುಕಾಲ ಬಾಳಿದೆನು ನೆರಳಾಗಿ
ತುಸುಕಾಲ ಬಾಳಲೇ ನನಗಾಗಿ?
ಮಾತಿಂದ ನೀ ಎನ್ನ ಜರಿಯದಿರು
ಕಣ್ಣಿಂದಲೇ ಇರಿದೆನ್ನ ಕೊಲ್ಲದಿರು
ಕಳುಹು ಬಾರ ಬಾಗಿಲಿಗೆ ಬಂದು.
ಬಂಧ ಮುಕ್ತವಾಗಿಸು ನೀ ಇಂದು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ
More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ