ಬಂಧ ಮುಕ್ತವಾಗಿಸು ಇಂದು
ಸೂತ್ರದ ಗೊಂಬೆಯೇನು ನಾನು?
ನನಗೂ ಮನಸೆಂಬುದಿಲ್ಲವೇನು?
ತವರಿನಟ್ಟದಲಿ ಕನಸೆಲ್ಲ ಕಟ್ಟಿಟ್ಟು
ನಿನ್ನೆಡೆಗೆ ಬಂದೆನು ಅಡಿಯನಿಟ್ಟು
ಕಣ್ಣಂಚ ಕಂಬನಿ ಅಲ್ಲಲ್ಲೇ ಒರೆಸಿ
ಬಾರದ ನಗುವ ತುಟಿಯೊಳಿರಿಸಿ
ನೀ ಕುಣಿಸಿದಂತೆ ಕುಣಿದೆನು ನಲ್ಲ
ಥೈ ಥೈ ತಕ ಥೈ…
ಕುಣಿವ ಹೆಜ್ಜೆಯು ಸೋತಿಹುದು
ತೊಟ್ಟ ಗೆಜ್ಜೆಯೂ ಸವೆದಿಹುದು
ಬಿಡುಗಡೆ ಬಯಸಿದೆ ಕಣ ಕಣವು
ಮುಗಿದಿದೆ ದೊರೆ ನಮ್ಮಋಣವು
ಬಹುಕಾಲ ಬಾಳಿದೆನು ನೆರಳಾಗಿ
ತುಸುಕಾಲ ಬಾಳಲೇ ನನಗಾಗಿ?
ಮಾತಿಂದ ನೀ ಎನ್ನ ಜರಿಯದಿರು
ಕಣ್ಣಿಂದಲೇ ಇರಿದೆನ್ನ ಕೊಲ್ಲದಿರು
ಕಳುಹು ಬಾರ ಬಾಗಿಲಿಗೆ ಬಂದು.
ಬಂಧ ಮುಕ್ತವಾಗಿಸು ನೀ ಇಂದು.
- ‘ವೈಸ್ ಅಡ್ಮಿರಲ್’ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ನೇಮಕ
- ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ
- ಕುಮಾರಸ್ವಾಮಿ ಗೆಲ್ಲಿಸಿ, ಕೇಂದ್ರ ಮಂತ್ರಿ ಸ್ಥಾನ ಸಾಧ್ಯತೆ : ಬಿಜೆಪಿ ಶಾಸಕ ಸುರೇಶ್ ಕುಮಾರ್
- ಮಂಡ್ಯದಲ್ಲಿ ಐಸ್ಕ್ರೀಂ ತಿಂದು ಅವಳಿ ಮಕ್ಕಳು ಸಾವು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ದೇವೇಗೌಡರಿಂದ ಡಿ ಸಿ ಎಂ ಡಿಕೆಶಿ ವಿರುದ್ಧ ಗಂಭೀರ ಆರೋಪ