ಅನ್ಯ ಜಾತಿ ಹುಡುಗನನ್ನು ಪ್ರೀತಿಸಿದ್ದಕ್ಕೆ ತಂದೆಯೊಬ್ಬ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಪಿರಿಯಾಪಟ್ಟಣ ದಲ್ಲಿ ಶುಕ್ರವಾರ ಜರುಗಿದೆ.
ಪಿರಿಯಾಪಟ್ಟಣ ಮಹದೇಶ್ವರ ದೇವಸ್ಥಾನದ ಬೀದಿಯ ನಿವಾಸಿ ಜಯಣ್ಣ ಎಂಬಾತ ತನ್ನ ಮಗಳು ಗಾಯತ್ರಿ (18) ಯನ್ನು ಭೀಕರ ವಾಗಿ ಹತ್ಯೆ ಮಾಡಿದ್ದಾನೆ.
ಮಗಳು ಗಾಯತ್ರಿ ಅನ್ಯ ಜಾತಿ ಹುಡುಗನನ್ನು ಪ್ರೀತಿ ಮಾಡುತ್ತಿರುವ ವಿಷಯ ತಿಳಿದು ಮನೆತನದ ಮರ್ಯಾದೆ ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಮಗಳನ್ನೇ ಹತ್ಯೆ ಮಾಡಿ ಪೋಲಿಸರಿಗೆ ಶರಣಾಗಿದ್ದಾನೆ.
ಹುಣಸೂರು ಡಿವೈಎಸ್ಪಿ ರವಿ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.