ಪಾಂವಪುರ -ಇಂಥದ್ದೊಂದು ಸಿನಿಮಾವನ್ನು ನೋಡಲೇಬೇಕು ಎಂದು ಪ್ರಚಾರ ಆದ ಪರಿಣಾಮಮಂಡ್ಯದ ಪಾಂಡವಪುರ ಸಮೀಪದ ಹಾರೋಹಳ್ಳಿ ಗ್ರಾಮದ ನಿವಾಸಿ ಡೈಮಂಡ್ ರವಿ ಪಾಂಡವಪುರದ ಕೋಕಿಲ ಚಿತ್ರಮಂದಿರಕ್ಕೆ ಹೋಗಿ ಒಬ್ಬರೇ ಕೂತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದ್ದಾರೆ.
ಈ ಸಿನಿಮಾ ನೋಡಲು ರವಿ ಪಾಂಡವಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿರುವ ಈ ಥಿಯೇಟರ್ ನಲ್ಲಿ ಸಿನಿಮಾ ಪ್ರದರ್ಶನವಿದ್ದರೂ, ಯಾರೂ ಬಂದಿಲ್ಲ.
ಹಾಗಾಗಿ ಮೊದ ಮೊದಲು ರವಿಗೆ ನಿರಾಸೆಯಾಗಿದೆ. ಒಬ್ಬನೇ ಇದ್ದ ಕಾರಣಕ್ಕಾಗಿ ಪ್ರದರ್ಶನ ರದ್ದು ಮಾಡುವುದಾಗಿ ಥಿಯೇಟರ್ ಮಾಲೀಕರು ಹೇಳಿದ್ದಾರೆ.
ತಾನು ಈ ಸಿನಿಮಾ ನೋಡಲೇಬೇಕೆಂದು ಬಂದಿದ್ದರಿಂದ ಏನು ಮಾಡುವುದೆಂದು ತಿಳಿಯದೇ, ಪ್ರದರ್ಶನ ಮಾಡಲು ಎಷ್ಟು ಟಿಕೇಟ್ ತಗೆದುಕೊಳ್ಳಬೇಕು ಎಂದು ಕೇಳಿದ್ದಾನೆ.
ಕನಿಷ್ಠ ಹತ್ತು ಟಿಕೇಟ್ ಆದರೂ ಕೊಂಡರೆ, ಸಿನಿಮಾ ತೋರಿಸುವುದಾಗಿ ಮಾಲೀಕರು ಹೇಳಿದ್ದಾರೆ. ತಾನೊಬ್ಬನೇ ಅಷ್ಟೂ ಟಿಕೇಟ್ ತಗೆದುಕೊಂಡು ಏಕಾಂಗಿ ಆಗಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ್ದಾರಂತೆ ಡೈಮಂಡ್ ರವಿ.
ಒಬ್ಬರೇ ಸಿನಿಮಾ ವೀಕ್ಷಿಸುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರವಿಯ ದೇಶಪ್ರೇಮ ಕಂಡ ಹಲವರು ಹೊಗಳುತ್ತಿದ್ದಾರೆ. ಇಂತಹ ಸಿನಿಮಾವನ್ನು ಒಬ್ಬರೇ ನೋಡುವಾಗ ಭಯವಾಗಲಿಲ್ಲವೆ ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ.
- ಲಖನೌ ತಂಡವನ್ನು14 ರನ್ ಗಳಿಂದ ಮಣಿಸಿದ RCB – ಫೈನಲ್ ಪಂದ್ಯಕ್ಕೆ ಇನ್ನೂ ಒಂದು ಗೆಲವು ಅಗತ್ಯ
- ಉದ್ಯಮಿ ಆದಿಕೇಶವಲು ಪುತ್ರ ಶ್ರೀನಿವಾಸ್ ಬಂಧನ: ಜೈಲು
- ಮಂಡ್ಯದಲ್ಲಿ ಮಳೆ ಹಾನಿ ನಷ್ಟಕ್ಕೆ 2 ದಿನದೊಳಗೆ ಪರಿಹಾರ ಕೊಡಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದೇಶ
- ಲವ್ ಮಾಕ್ಟೈಲ್ ನಂತರ ಲವ್ ಬರ್ಡ್ಸ್ ಆಗಿ ಮೂಡಿ ಬರುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ
- ಮಂಗಳಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ
- ಪದವೀಧರರ ಕ್ಷೇತ್ರದ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ನಾಮಪತ್ರ ಸಲ್ಲಿಕೆ
More Stories
ಲವ್ ಮಾಕ್ಟೈಲ್ ನಂತರ ಲವ್ ಬರ್ಡ್ಸ್ ಆಗಿ ಮೂಡಿ ಬರುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ
ಮಂಗಳಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ
ಪದವೀಧರರ ಕ್ಷೇತ್ರದ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ನಾಮಪತ್ರ ಸಲ್ಲಿಕೆ