ಪೊಲೀಸರ ಮುಂದೆಯೇ ಆರೋಪಿತ ಪಿಡಿಒ ಪರಾರಿಯಾದ ಘಟನೆ ಕುಣಿಗಲ್ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ನಡೆಯಿತು.ಮಂಗಳವಾರ ಲೋಕಾಯುಕ್ತ ಎಸ್ಪಿ ವಲಿಭಾಷ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯುತ್ತಿತ್ತು.
ಸಭೆಯಲ್ಲಿ ಬೇಗೂರು ಗ್ರಾಮದ ಕಾಮಗಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಬೇಗೂರು ಪಿಡಿಒ ಮೇಲೆ ಪ್ರಕರಣ ದಾಖಲಾಗಿದ್ದರೂ ಬಂಧನವಾಗಿರಲಿಲ್ಲ, ಪಿರ್ಯಾದುದಾರ ದೂರು ನೀಡಿದ್ದು, ಸಭೆಯಲ್ಲಿ ಹಾಜರಿದ್ದ ಪಿಡಿಒ ಸುದರ್ಶನ್ ಅವರನ್ನು ವಶಕ್ಕೆ ಪಡೆ ಯುವಂತೆ ಲೋಕಾಯುಕ್ತ ಸಿಪಿಐ ವಿಜಯಕುಮಾರ್ ಕುಣಿಗಲ್ ಪಿಎಸೈ ಜಮಾಲ್ ಅಹಮದ್ ಅವರಿಗೆ ಸೂಚಿಸಿದರು.
ಇದನ್ನು ಓದಿ –ದ್ವಿತೀಯ ಪಿಯುಸಿ ಮೌಲ್ಯಮಾಪಕರಿಗೆ ಶೇ.20ರಷ್ಟು ಸಂಭಾವನೆ ಹೆಚ್ಚಳ
ಅಷ್ಟರಲ್ಲಿ ಸಭೆಯಲ್ಲಿದ್ದ ಪಿಡಿಒ ಪರಾರಿ. ಈ ವಿಷಯವಾಗಿ ಲೋಕಾಯುಕ್ತ ಸಿಪಿಐ, ಕುಣಿಗಲ್ ಪಿಎಸೈ ಅವರನ್ನು ತರಾಟೆಗೆ ತೆಗೆದುಕೊಂಡು ಕರೆತರುವಂತೆ ಸೂಚಿಸಿದರು, ಆದರೆ ಪಿಡಿಒ ನಂಬರ್ ಸ್ವಿಚ್ ಆಫ್ ಆಗಿದ್ದು ಅವರನ್ನು ಪೊಲೀಸರು ಪತ್ತೆಗೆ ಕ್ರಮ ತೆಗೆದುಕೊಂಡಿದ್ದಾರೆ.
ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ರವೀಶ್, ತಹಶೀಲ್ದಾರ್ ಮಹಾಬಲೇಶ್ವರ್, ತಾಪಂ ಇಒ ಜೋಸೆಫ್, ಲೋಕಾಯುಕ್ತ ಸಿಪಿಐ ವಿಜಯಕುಮಾರ್ ಇತರರು ಇದ್ದರು.
- ‘ವೈಸ್ ಅಡ್ಮಿರಲ್’ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ನೇಮಕ
- ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ
- ಕುಮಾರಸ್ವಾಮಿ ಗೆಲ್ಲಿಸಿ, ಕೇಂದ್ರ ಮಂತ್ರಿ ಸ್ಥಾನ ಸಾಧ್ಯತೆ : ಬಿಜೆಪಿ ಶಾಸಕ ಸುರೇಶ್ ಕುಮಾರ್
- ಮಂಡ್ಯದಲ್ಲಿ ಐಸ್ಕ್ರೀಂ ತಿಂದು ಅವಳಿ ಮಕ್ಕಳು ಸಾವು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ದೇವೇಗೌಡರಿಂದ ಡಿ ಸಿ ಎಂ ಡಿಕೆಶಿ ವಿರುದ್ಧ ಗಂಭೀರ ಆರೋಪ