ಪಾರ್ವತಮ್ಮ ರಾಜ್ ಕುಮಾರ್ ತಮ್ಮನ ಮಗನಿಗೆ ಅಪಘಾತ: ಬಲಗಾಲು ಕತ್ತರಿಸಿದ ವೈದ್ಯರು

Team Newsnap
1 Min Read
Parvathamma Rajkuma's nephew met with an accident ಪಾರ್ವತಮ್ಮ ರಾಜ್ ಕುಮಾರ್ ತಮ್ಮನ ಮಗನಿಗೆ ಅಪಘಾತ: ಬಲಗಾಲು ಕತ್ತರಿಸಿದ ವೈದ್ಯರು

ಮೈಸೂರು: ದಿ. ಪಾರ್ವತಮ್ಮ ರಾಜ್​ಕುಮಾರ್ ಅವರ ತಮ್ಮನ ಪುತ್ರ, ಯುವ ನಟ ಸೂರಜ್​​ಗೆ ಬೈಕ್ ಅಪಘಾತದಲ್ಲಿ ಗಂಭೀರವಾಗಿದೆ. ಬಲಗಾಲನ್ನು ವೈದ್ಯರು ತೆಗೆದಿದ್ದಾರೆ .

ಬೈಕ್ ನಲ್ಲಿ ಊಟಿಗೆ ಹೋಗುತ್ತಿದ್ದಾಗ ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ.

ಯುವ ನಟ ಸೂರಜ್‌ ಮೈಸೂರಿನಿಂದ ಊಟಿಗೆ ತೆರಳುತ್ತಿದ್ದ ಎನ್ನಲಾಗಿದೆ. ಸದ್ಯ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸೂರಜ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್​ನಲ್ಲಿ ಹೋಗ್ತಿದ್ದಾಗ ಟಿಪ್ಪರ್ ಹರಿದು ಅನಾಹುತ ಸಂಭವಿಸಿದೆ ಸೂರಜ್ ಬಲಗಾಲಿನ ಮಂಡಿಯವರೆಗೆ ಕಾಲನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ ಎನ್ನಲಾಗಿದೆ.ರಷ್ಯಾದಲ್ಲಿ ‌ “ಸಶಸ್ತ್ರ ದಂಗೆ” ವಾಪಸ್ಸು ಪಡೆದ ವ್ಯಾಗ್ನರ್ ಪಡೆಗಳು

ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.

Share This Article
Leave a comment