ವಿವಾಹಿತನ ಜೊತೆ ಮದುವೆ ನಿರಾಕರಿಸಿದ ಪೋಷಕರು – ಪ್ರೇಮಿಗಳ ಆತ್ಮಹತ್ಯೆ

Team Newsnap
0 Min Read

ವಿವಾಹಿತನ ಜೊತೆ ಮದುವೆ ಮಾಡಲು ಯುವತಿ ಪೊಷಕರು ನಿರಾಕರಣೆ ಹಿನ್ನೆಲೆ, ಪ್ರೇಮಿಗಳಿಬ್ಬರೂ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕೂನಿಕೆರೆ ಜರುಗಿದೆ.

ಪರಶುರಾಮಪುರ ನಿವಾಸಿ, ತಿಪ್ಪೇಸ್ವಾಮಿ (32), ಉಡುವಳ್ಳಿ ನಿವಾಸಿ ಪುಷ್ಪಲತಾ(21), ಆತ್ಮಹತ್ಯೆಗೆ ಮಾಡಿಕೊಂಡವರು.

ಮೃತ ತಿಪ್ಪೇಸ್ವಾಮಿ ವಿವಾಹಿತ. ಆತನನ್ನು ಪುಷ್ಪಲತಾ ಒಂದು ವರ್ಷದಿಂದ ಪ್ರೀತಿಸುತ್ತಿದ್ದಳಂತೆ. ಅವನನ್ನೇ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಳಂತೆ.

ಆದರೆ ವಿವಾಹಿತನ ಜೊತೆ ಮದುವೆ ಮಾಡಲು ಮನೆಯವರು ನಿರಾಕರಿಸಿದ್ದರು.‌ ಇದರಿಂದ ಮನನೊಂದ ಪುಷ್ಪಲತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ತಿಪ್ಪೇಸ್ವಾಮಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Share This Article
Leave a comment