ರೋಹಿಣಿಗೆ ಮತ್ತೆ ಸಂಕಷ್ಟ – ಮೈಸೂರು ಡಿಸಿ ಆಗಿದ್ದ ವೇಳೆ ಮಾಡಿದ್ದ ಅಕ್ರಮ ಆರೋಪ ತನಿಖೆಗೆ ಆದೇಶ

Team Newsnap
1 Min Read

ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ದ ಕೇಳಿ ಬಂದ ಪ್ರಮುಖ ಆರೋಪಗಳ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ. ಶಾಸಕ ಸಾ ರಾ ಮಹೇಶ್ ಮಾಡಿದ್ದ ಪ್ರಮುಖ ಆರೋಪಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ಬಯಸಿದೆ.

ಈ ಕುರಿತಂತೆ ಸರ್ಕಾರ ಅಧೀನ ಕಾರ್ಯದರ್ಶಿ ಜಯರಾಂ ಅವರನ್ನು ನೇಮಕ ಮಾಡಿ 30 ದಿನದೊಳಗೆ ವರದಿ ನೀಡುವಂತೆ ಸೂಚಿಸಿದೆ.

ಇದನ್ನು ಓದಿ : SSLC ಫಲಿತಾಂಶ 2022 : ಮರು ಎಣಿಕೆ, ಮೌಲ್ಯಮಾಪನ ಅರ್ಜಿ ಸಲ್ಲಿಕೆ ವಿವರ

ಯಾವ ಆರೋಪಗಳ ಬಗ್ಗೆ ತನಿಖೆ

  • ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ – ಕೋಟ್ಯಾಂತರ ರು ಹಣ ಅಕ್ರಮ ಮಾಡಿರುವ ಕುರಿತಂತೆ
  • 50 ಲಕ್ಷ ರು ವೆಚ್ಚದಲ್ಲಿ ಡಿಸಿ ಮನೆಯಲ್ಲಿ ಸ್ವಿಮಿಂಗ್ ಫೂಲ್ ಹಾಗೂ ಜಿಮ್
  • ಪರಂಪರಿಕ ಕಟ್ಟಡಕ್ಕೆ ಧಕ್ಕೆ
  • ಕೊರೊನಾ ವೇಳೆ ಸಾವಿನ ಅಂಕಿ ಅಂಶ ಮುಚ್ಚಿಟ್ಟ ಬಗ್ಗೆಯೂ ವಿಚಾರಣೆ ನಡೆಯಲಿದೆ.
Share This Article
Leave a comment