ಬಾಲಿವುಡ್ ಬೆಡಗಿ ಸನ್ನಿಲಿಯೋನ್ ರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದ ಮಂಡ್ಯದ ಯುವಕರಿಗೆ ನಟಿ ಧನ್ಯವಾದ ತಿಳಿಸಿ ಅವಕಾಶ ಸಿಕ್ಕಾಗ ಮಂಡ್ಯಕ್ಕೆ ಹೋಗುವೆ ಎಂದು ಸನ್ನಿ ಹೇಳಿದ್ದಾರೆ.
ನಿಮ್ಮ ಕೆಲಸ ನನ್ನ ಹೃದಯ ಮುಟ್ಟಿದೆ. ತುಂಬಾ ಪ್ರೀತಿ ತೋರಿಸಿದ್ದೀರಿ ಇದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾನು ಮಂಡ್ಯ ಅಭಿಮಾನಿಗಳನ್ನು ಯಾವಾಗ ಭೇಟಿ ಮಾಡ್ತೀನಿ ಅಂತ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಭೇಟಿ ಆದ್ರೆ ಖಂಡಿತ ಅವರೊಂದಿಗೆ ಇರೋ ಫೋಟೋಗಳನ್ನು ಹಂಚಿಕೊಳ್ಳುತ್ತೇವೆ ಎಂದರು.
ಬೆಂಗಳೂರಿನಲ್ಲಿ ನಡೆದ ಚಾಂಪಿಯನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಭಾಗಿಯಾಗಿದ್ದರು.
ನಿಮ್ ಫೋಟೋ ತೋರಿಸಿ ಮಟನ್ ರೇಟ್ನಲ್ಲಿ ಡಿಸ್ಕೌಂಟ್ ಕೊಡ್ತಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸನ್ನಿ ಲಿಯೋನ್.. ಮೊದಲು ನಾನು ಸಸ್ಯಹಾರಿ. ಪ್ರಾಣಿಗಳನ್ನು ಕೊಂದು ತಿನ್ನೊದು ಬಗ್ಗೆ ನಂಬಿಕೆ ಇಲ್ಲ. ಆದರೆ ಅವರಿಗೆ ಆ ಕೆಲಸ ಇಷ್ಟವಾಗಿ ಮಾಡ್ತಿದ್ದಾರೆ ಒಳ್ಳೆದಾಗಲಿ ಅಷ್ಟೇ ಎಂದರು.
ಇದನ್ನು ಓದಿ : SSLC ನಂತರ ವಿದ್ಯೆ, ಉದ್ಯೋಗದ ಬೆಳಕು
ಇದೇ ವೇಳೆ ಸಿನಿಮಾ ತಂಡ ಸ್ಟೇಜ್ ಮೇಲೆ ಸನ್ನಿ ಬರ್ತ್ಡೇ ಆಚರಣೆ ಮಾಡಿತ್ತು. ಶಿವರಾಜ್ ಶಿಂಧೆ ನಿರ್ದೇಶನದ ಚಾಂಪಿಯನ್ ಸಿನಿಮಾದಲ್ಲಿ ಅಧಿತಿ ಪ್ರಭುದವ ನಾಯಕಿಯಾಗಿ ನಟಿಸಿದ್ದು, ಸಚಿನ್ ಧನಪಾಲ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದಾರೆ.
- ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ
- 3.55 ಕೋಟಿ ರೂ. ಮೌಲ್ಯದ 5 ಕೆಜಿ ಚಿನ್ನಾಭರಣ ಜಪ್ತಿ
- ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಏಪ್ರಿಲ್ 1 ರಿಂದ ಹೆಚ್ಚಳ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ
- ಮುನಿಯಪ್ಪ ವಿರುದ್ಧ ಮುನಿಸು : ಓರ್ವ ಸಚಿವರೂ ಸೇರಿದಂತೆ ಐವರು ಶಾಸಕರ ರಾಜೀನಾಮೆ ?