ರಾಮನಗರ ಬಳಿ ಓಮಿನಿ ಕಾರ್ ಲಾರಿಗೆ ಡಿಕ್ಕಿ : ಭೀಕರ ಅಪಘಾತ – ಇಬ್ಬರು ಸಾವು

Team Newsnap
1 Min Read

ರಾಮನಗರ: ವೇಗವಾಗಿ ಹೋಗುತ್ತಿದ್ದ ಮಾರುತಿ ಓಮಿನಿ ಕಾರ್ ವೊಂದು ಲಾರಿ ಹಿಂದಿಕ್ಕಲು ಹೋಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಧಾರುಣವಾಗಿ ಸಾವನ್ನಪ್ಪಿದ ಘಟನೆ ರಾಮನಗರದ ಬಳಿ ಸಂಭವಿಸಿದೆ.

ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆಂಪೇಗೌಡನದೊಡ್ಡಿ ಬಳಿ ಸಂಭವಿಸಿದ ಘಟನೆಯಲ್ಲಿ ಪತಿ -ಪತ್ನಿ ಸಾವನ್ನಪ್ಪಿದ್ದಾರೆ .

ಬೆಂಗಳೂರಿನ ಪೀಣ್ಯ ಮೂಲದವರಾದ ರಾಜೇಶ್ ಮತ್ತು ಪತ್ನಿ ಉಮಾ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸ್ಮಶಾನದಲ್ಲೇ 15 ಸಾವಿರ ರು ಲಂಚ ಸ್ವೀಕಾರ – ಶಿವಮೊಗ್ಗ ಸಮಾಜ ಕಲ್ಯಾಣ ಅಧಿಕಾರಿ ಲೋಕ ಬಲೆಗೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಬರಬೇಕಿದೆ ರಾಮನಗರ ಸಂಚಾರಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

Share This Article
Leave a comment