ಪ್ರೋ. ಭಗವಾನ್ ನಿವಾಸ ಮುಂದೆ ಒಕ್ಕಲಿಗರ ಭಾರಿ ಪ್ರತಿಭಟನೆ: ಬಂಧನ

Team Newsnap
1 Min Read

ಮೈಸೂರು : ಒಕ್ಕಲಿಗರು ಸಂಸ್ಕೃತಿ ಇಲ್ಲದವರು ಎಂಬ ಪ್ರೊ ಕೆ ಎಸ್ ಭಗವಾನ್ ಹೇಳಿಕೆ ಖಂಡಿಸಿಮೈಸೂರಿನ ಕುವೆಂಪು ನಗರ ನಿವಾಸದ ಬಳಿ ಒಕ್ಕಲಿಗರು ಶನಿವಾರ ಪ್ರತಿಭಟನೆ ನಡೆಸಿದರು.

ಭಗವಾನ್ ನಿವಾಸದ ಮುಂಭಾಗ ಸೇರಿದ್ದ ಒಕ್ಕಲಿಗ ಮುಖಂಡರು ಹಾಗೂ ಯುವ ಸಮೂಹ ಭಗವಾನ್ ಯಾವ ಸಮುದಾಯಕ್ಕೆ ಹುಟ್ಟಿದ್ದಾನೆ ಎಂದು ಪ್ರಶ್ನೆ ಮಾಡಿದರು.

ನಮಗೆ ಸಂಸ್ಕೃತಿ ಇಲ್ಲ ಎಂದಿದ್ದಾರೆ.ಭಗವಾನ್ ಬಂದು ಸಂಸ್ಕೃತಿ ಪಾಠ ಹೇಳಲಿ ಎಂದು ಪ್ರತಿಭಟನಕಾರರ ಒತ್ತಾಯ ಮಾಡಿದರು.ರಾಮನಗರ ಬಳಿ ಓಮಿನಿ ಕಾರ್ ಲಾರಿಗೆ ಡಿಕ್ಕಿ : ಭೀಕರ ಅಪಘಾತ – ಇಬ್ಬರು ಸಾವು

ಭಗವಾನ್ ನಿವಾಸದ ಮುಂದೆ ಧರಣಿ ಕುಳಿತ ಪ್ರತಿಭಟನಾಕಾರರನ್ನು ಪೋಲೀಸರು ತಡೆದರು. ಆದರೂರಸ್ತೆಯಲ್ಲೇ ಕುಳಿತು ಭಗವಾನ್ ಗಡಿಪಾರು ಮಾಡುವಂತೆ ಒತ್ತಾಯ ಮಾಡಿದರು. ಭಗವಾನ್ ಗೆ ದಿಕ್ಕಾರದ ಎಂದು ಘೋಷಣೆ ಕೂಗಿದರು

Share This Article
Leave a comment