ನಟ ದರ್ಶನ್, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಗೆ ಅರಣ್ಯ ಇಲಾಖೆ ನೋಟೀಸ್

Team Newsnap
1 Min Read

ಬೆಂಗಳೂರು: ಹುಲಿ ಉಗುರು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಜಗ್ಗೇಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಈ ಕುರಿತಂತೆ ಬೆಂಗಳೂರು ವನ್ಯಜಿವಿ ಅರಣ್ಯಾಧಿಕಾರಿ ರವೀಂದ್ರ ಕುಮಾರ್ ಅವರು, ಹುಲಿ ಉಗುರು ಧರಿಸಿದ್ದಂತ ನಟ ಜಗ್ಗೇಶ್, ದರ್ಶನ್, ರಾಕ್ ಲೈನ್ ವೆಂಕಟೇಶ್ ಅವರಿಗೆ ನೋಟಿಸ್ ನೀಡಲಾಗಿದೆ ಅಂತ ತಿಳಿಸಿದ್ದಾರೆ.

ಯಾರೆಲ್ಲ ಹುಲಿ ಉಗುರು ಧರಿಸಿದ್ದಾರೋ ಅವರಿಗೆಲ್ಲ ನೋಟಿಸ್ ನೀಡುತ್ತೇವೆ. ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ ಅಂತ ಪರಿಶೀಲನೆ ನಡೆಸಲಾಗುತ್ತದೆ. ಅಸಲಿ ಆಗಿದ್ದರೇ ಕಾನೂನು ಕ್ರಮ ಕೈಗೊಳ್ಳೋದಾಗಿ ಹೇಳಿದರು.

ಈಗಾಗಲೇ ಹುಲಿ ಉಗುರು ಧರಿಸಿದಂತ ಪ್ರಕರಮ ಸಂಬಂಧ ನಾಲ್ಕು ತಂಡಗಳನ್ನು ರಚಿಸಲಾಗಿದೆ. ನಾಲ್ಕು ತಂಡದ ಅಧಿಕಾರಿಗಳು ಈಗಾಗಲೇ ದೂರು ದಾಖಲಾಗಿರುವಂತ ಸೆಲೆಬ್ರೆಟಿಗಳ ನಿವಾಸದಲ್ಲಿ ಪರಿಶೀಲನೆ ತೆರಳಿದ್ದಾರೆ. ಮೈಸೂರಿನಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯ ಚಾಲನೆ : ಲಕ್ಷಾಂತರ ಜನ ಭಾಗಿ 

ಅವರ ನಿವಾಸವನ್ನು ಪರಿಶೀಲನೆ ಮಾಡಿ, ಮುಂದಿನ ಕ್ರಮ ವಹಿಸೋದಾಗಿ ತಿಳಿಸಿದರು.

Share This Article
Leave a comment