ಯುಗಾದಿ ದಿನವೇ ನವವಿವಾಹಿತೆ ಆತ್ಮಹತ್ಯೆ : ಪತಿ, ಅತ್ತೆ-ಮಾವನ ವಿರುದ್ದ ಕೊಲೆ ಆರೋಪ

Team Newsnap
0 Min Read

ಯುಗಾದಿ ದಿನದಂದೇ ನವವಿವಾಹಿತೆ ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ಜರುಗಿದೆ

ಎನ್.ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿ ಸಾವನ್ನಪ್ಪಿದ ಮಹಿಳೆ.

ಪತಿ ನಂದಿತ್, ಅತ್ತೆ ಸಾವಿತ್ರಮ್ಮ, ಮಾವ ಚಂದ್ರೆಗೌಡ ವಿಷ ಕುಡಿಸಿ ಗಾನವಿಯನ್ನ ಕೊಲೆ ಮಾಡಿರುವ ಆರೋಪವು ಕೇಳಿ ಬಂದಿದೆ.

ಕಳೆದ ವರ್ಷವಷ್ಟೇ ನಂದೀತ್ ಗಾನವಿಯನ್ನ ಮದುವೆಯಾಗಿದೆ ಅನೇಕ ಬಾರಿ ಹಣ ತರುವಂತೆ ದೈಹಿಕ ಕಿರುಕುಳ ನೀಡಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment