ಬೆಳಗಾವಿ ಹೊರವಲಯದ ಹಿಂಡಲಗಾ ಗಣಪತಿ ದೇಗುಲದ ಬಳಿಯಿರುವ ಕೆರೆಯಲ್ಲಿ ಅನುಮಾನಾಸ್ಪದ ತಾಯಿ ಹಾಗೂ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ.
ಕೃಷ್ಣಾ(36), ಭಾವೀರ್(4), ವಿರೇನ್ ಮೃತದೇಹ ಪತ್ತೆಯಾಗಿದೆ.
ನಿನ್ನೆ ಬೆಳಗ್ಗೆ ಇಬ್ಬರು ಮಕ್ಕಳ ಜೊತೆ ತಾಯಿ ಕೃಷ್ಣಾ ಮನೆಯಿಂದ ತೆರಳಿದ್ದಳು. ಇಂದು ತಾಯಿ ಹಾಗೂ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ.
ಮಹಾರಾಷ್ಟ್ರದ ಮೀರಜ್ನಿಂದ ಆಗಮಿಸಿದ ಮೃತ ಮಹಿಳೆಯ ಕುಟುಂಬಸ್ಥರು ಮಗಳ ಸಾವಿಗೆ ನ್ಯಾಯ ದೊರಕಿಸುವಂತೆ ಕಣ್ಣೀರಿಟ್ಟಿದ್ದಾರೆ.
ಇಬ್ಬರು ಮಕ್ಕಳ ಜೊತೆ ತಾಯಿಯನ್ನು ಕೊಂದು ಕೆರೆಗೆ ಹಾಕಿದ್ದಾರೆ ಎಂದು ಕೃಷ್ಣಾ ಪತಿ ಮನೀಷ್ ಕೇಶವಾಣಿ ವಿರುದ್ಧ ಆರೋಪಿಸಿದ್ದಾರೆ.