ಮೃತ ಗಂಡನ ನಕಲಿ ದಾಖಲೆ ನೀಡಿ ಮೂರು ಕೋಟಿ ವಿಮೆ ಹಣ ಪಡೆದುಕೊಂಡ ಪತ್ನಿ ವಿರುದ್ಧ ವಿಮಾ ಕಂಪನಿ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಟ್ವಸ್ಟ್ ಸಿಕ್ಕಿದೆ.
ಮೃತ ಕೃಷ್ಣ ಪ್ರಸಾದ್ ಗಾರಲಪಟ್ಟಿ ಎಂಬುವವರು ಟಾಟಾ ಎಐಎ ಲೈಫ್ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ವರ್ಷಕ್ಕೆ 51,777 ರೂಗಳನ್ನು ಕಟ್ಟುವ ಪಾಲಿಸಿ ಪಡೆದಿದ್ದರು.
ಆದರೆ ಮೂರು ವರ್ಷ ಪಾಲಿಸಿ ಕಟ್ಟುವ ಮುನ್ನವೇ ಸುಪ್ರಿಯಾ ಪತಿ ಮೃತಪಟ್ಟಿದ್ದರು. ಹೆಂಡತಿ ಸುಪ್ರಿಯಾರನ್ನು ನಾಮಿನಿ ಮಾಡಿದ್ದ ಕಾರಣ, ಅದನ್ನೇ ದುರುಪಯೋಗ ಪಡಿಸಿಕೊಂಡ ಪತ್ನಿ ತನ್ನ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅನ್ಲೈನ್ ಮೂಲಕ ವಿಮೆ ಹಣಕ್ಕಾಗಿ ಕ್ಲೈಮ್ ಮಾಡಿ 3 ಕೋಟಿ ಹಣವನ್ನು ಪಡೆದಿದ್ದರು.
ಸುಪ್ರಿಯಾ ಅಕೌಂಟ್ ಫ್ರೀಜ್
ಸುಳ್ಳು ಮಾಹಿತಿ ಹಾಗೂ ನಕಲಿ ದಾಖಲೆ ನೀಡಿ 3 ಕೋಟಿ ಕ್ಲೈಮ್ ಮಾಡಿದ್ದಾರೆ ಎಂಬುದು ಇನ್ಶ್ಯೂರೆನ್ಸ್ ಕಂಪನಿಗೆ ತಡವಾಗಿ ತಿಳಿದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಮೃತನ ಪತ್ನಿಯ ವಿರುದ್ಧ ಇನ್ಶ್ಯೂರೆನ್ಸ್ ಕಂಪನಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿ ಸುಪ್ರಿಯಾ ಅಕೌಂಟ್ನಲ್ಲಿರುವ ಹಣವನ್ನು ಫ್ರೀಜ್ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಇನ್ಶ್ಯೂರೆನ್ಸ್ ಕಂಪನಿಯಿಂದ ಪಡೆದಿದರು.
ಮೂರು ಕೋಟಿ ಹಣದ ಪೈಕಿ ಇದುವರೆಗೆ ಸುಮಾರು 45 ಲಕ್ಷ ಹಣವನ್ನು ಸುಪ್ರಿಯಾ ಡ್ರಾ ಮಾಡಿರುವುದು ತಿಳಿದು ಬಂದಿದೆ.
ಮೂರು ಕೋಟಿ ಹಣದ ಪೈಕಿ, ಸುಪ್ರಿಯಾಳ HDFC ಅಕೌಂಟ್ ನಿಂದ 2.55 ಕೋಟಿ ಹಣವನ್ನು ಫ್ರೀಜ್ ಮಾಡಲಾಗಿದೆ. ಹೆಚ್ಚಿನ ಹಣ ಆರೋಪಿತೆಯ ಕೈಗೆ ಸಿಗದ ರೀತಿ ತಡೆಯಲೆಂದೇ ಪೊಲೀಸರು ಸುಪ್ರಿಯಾಳ ಅಕೌಂಟ್ ಫ್ರೀಜ್ ಮಾಡಿದ್ದಾರೆ.
- ಕೇಂದ್ರ ಮಂತ್ರಿ ಅಮಿತ್ ಶಾ ಭೇಟಿ ಸಾಧ್ಯವಾಗಲಿಲ್ಲ : ಸಂಪುಟ ರಚನೆ ಬಗ್ಗೆ ಮಾತುಕತೆ ಇಲ್ಲ : ಸಿಎಂ
- ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
- ಕಾಂಗ್ರೆಸ್ನಲ್ಲೂ ಪರಷತ್ ಟಿಕಟ್ ಗೆ ಜೋರಾಯ್ತು ಗಲಾಟೆ – ಡಿಕೆಶಿ , ಸಿದ್ದು ದೆಹಲಿಗೆ
- ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು
- ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ
More Stories
ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು
ಕಾರು ಸರಣಿ ಅಪಘಾತ – ಓರ್ವ ಸಾವು : ಕಿರುತೆರೆ ಸಹ ನಿರ್ದೇಶಕ ಬಂಧನ