ತಿಗಳರಪಾಳ್ಯದ ಸಾಮೂಹಿಕ ಆತ್ಮಹತ್ಯೆ ಪ್ರಕರಣ :9 ತಿಂಗಳ ಹಸುಳೆಯ ಕತ್ತು ಹಿಸುಕಿ ಕೊಂದಿದ್ದ ತಾಯಿ

Team Newsnap
1 Min Read

ಬೆಂಗಳೂರಿನ ತಿಗುಳರಪಾಳ್ಯ ದಲ್ಲಿ ಮಂಡ್ಯ ಹಲ್ಲೇಗೆರೆ ಗ್ರಾಮ ಒಂದೇ ಕುಟುಂಬದ
ನಾಲ್ವರು ಆತ್ಮಹತ್ಯೆ ಹಾಗೂ ಒಂದು ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ತಾಯಿ ಸಿಂಧು ರಾಣಿಯೇ 9 ತಿಂಗಳ ತನ್ನ ಮಗುವನ್ನು ಕತ್ತುಹಿಸುಕಿ ಕೊಲೆ ಮಾಡಿ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಒಬ್ಬೊಬ್ಬರು ಒಂದೊಂದು ಕಾರಣ ನೀಡಿ ಕುಟುಂಬಸ್ಥರು ಸಾಯಲು ನಿರ್ಧರಿಸಿದ್ದರು. ಒಬ್ಬ ಅಪ್ಪ ಸರಿ ಇಲ್ಲ ಅಂದ, ಮತ್ತಿಬ್ಬಿರು ಗಂಡ ಸರಿ ಇಲ್ಲ ಅಂದಿದ್ದರು. ಹೀಗೆ ಒಂದೀಡಿ ಕುಟುಂಬವೇ ಸಾವನ್ನಪ್ಪಿತ್ತು.

ಆದರೆ ಇದೀಗ ಸತ್ತವಳ ಕಟುಕುತನ ಹೇಗಿತ್ತು ಎಂಬುದು ಅನಾವರಣ ಆಗಿದೆ. ಸಿಂಧು ರಾಣಿ ತಾನು ಸಾಯುವ ಮೊದಲು 9 ತಿಂಗಳ ತನ್ನ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಮಗುವಿನ ಕತ್ತಿನ ಬಳಿ ಹುಳು ಬಂದಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣ ಆಗಿತ್ತು. ಅನುಮಾನ ಈಗ ದೃಢವಾಗಿದೆ. ವೈದ್ಯಕೀಯ ವರದಿಯಲ್ಲಿ ಇದು ಕೊಲೆ ಎಂದು ಮಾಹಿತಿ ನೀಡಿವೆ.

ಪೊಲೀಸರಿಗೆ ಈ ಮಾಹಿತಿ ಮೌಖಿಕವಾಗಿ ಬಂದಿದೆ. ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

Share This Article
Leave a comment