ಕಷ್ಟಗಳಿಗೆ ಹೆದರಿ ಮಗು ಕೊಂದು ಅತ್ಮಹತ್ಯೆಗೆ ಯತ್ನಿಸಿದ ತಾಯಿಯ ಸ್ಥಿತಿ ಗಂಭೀರ

Team Newsnap
1 Min Read
mother killed child and now in critical stage ಕಷ್ಟಗಳಿಗೆ ಹೆದರಿ ಮಗು ಕೊಂದು ಅತ್ಮಹತ್ಯೆಗೆ ಯತ್ನಿಸಿದ ತಾಯಿಯ ಸ್ಥಿತಿ ಗಂಭೀರ

ಜೀವನದ ಕಷ್ಟಗಳಿಗೆ ಹೆದರಿದ ತಾಯಿಯೊಬ್ಬಳು ತನ್ನ ಮಗುವನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಹೆಚ್​ಎಎಲ್ ಬಳಿ ವಿಭೂತಿಪುರದಲ್ಲಿ ಜರುಗಿದೆ

ಕಳೆದ ಮೂರು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಯುಕ್ತಾ (3) ಎಂಬ ಮಗುವನ್ನು ತಾಯಿ ಗಾಯತ್ರಿ, ನೀರಿನ ಟಬ್​​ನಲ್ಲಿ ಮುಳಗಿಸಿ ಸಾಯಿಸಿರುವ ಅರೋಪ ಕೇಳಿಬಂದಿದೆ.ಇದನ್ನು ಓದಿ –ಜೈಪುರ ಕ್ಯಾಸಿನೊ ಪ್ರಕರಣ : ರಾಜ್ಯದ ಅಧಿಕಾರಿಗಳೂ ಸೇರಿ 84 ಮಂದಿ ಬಂಧನ- ಕೋಲಾರ CPI ಆಂಜಪ್ಪ ಅಮಾನತು

ಮಗುವನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪ್ರಜ್ಞೆ ಇಲ್ಲದೆ ಗಾಯತ್ರಿಯನ್ನು ಪತಿ ನರೇಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಗಾಯತ್ರಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಷ್ಟಗಳನ್ನು ಎದುರಿಸಲು ಆಗುತ್ತಿಲ್ಲ ಎಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನರೇಂದ್ರ ಹಾಗೂ ಗಾಯತ್ರಿ ದಂಪತಿ ತಮಿಳುನಾಡು ಮೂಲದವರು. ಇಪ್ಪತ್ತು ದಿನಗಳ ಹಿಂದಷ್ಟೇ ನರೇಂದ್ರ ಅವರ ತಾಯಿ ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

Share This Article
Leave a comment