
ಮುಂಬಯಿ
“ಹೀಗ್ಯಾಕೆ ಸುಮ್ಮನಿದ್ದುಬಿಟ್ಟಿದ್ದೀಯ?
ಮಾತಾಡು,
ಸದ್ದುಬರುವಂತೆ ಪಾದ ಒತ್ತಿ ನಡೆದಾಡು,
ನೀರು ಗುಟುಕರಿಸುವಾಗ ಬೇಕಂತಲೇ ಗಂಟಲು ಕೊಂಕಿಸು,
ಉಸಿರಾಟ ನೆನಪಾದಾಗೆಲ್ಲ ಸ್ವಲ್ಪ ಜೋರಾಗಿ ಉಸಿರೆಳೆದುಕೊ,
ಆಗಾಗ ಕನ್ನಡಿ ನೋಡಿಕೊಂಡು ಮುಖವಿದೆಯಾ ಅಂತ ಖಾತ್ರಿಮಾಡಿಕೊ……….
ನಗುವು ನಿನ್ನದು, ನಡಿಗೆ ನಿನ್ನದು;
ಆಕಳಿಕೆ, ಬಿಕ್ಕಳಿಕೆಗಳೂ ನಿನ್ನವು.
ಇಲ್ಲಿ ಹಠವಿದೆ, ತ್ಯಾಗವಿದೆ,
ಧ್ಯಾನವಿದೆ, ಪರಿಪೂರ್ಣ ಅರ್ಪಣೆಯಿದೆ.
ನೀ ದೇವಿಯಲ್ಲ;
ಬರಿ ಶಕ್ತಿಯಲ್ಲ..
ಮಾನವತೆಯ ಪರಿಪಾಕ.
ನಿನ್ನ ಆತ್ಮ ಸ್ಥೈರ್ಯ ಸಾಂಕ್ರಾಮಿಕವಾಗಬೇಕು
ಮಿಥ್ಯವನ್ನು ಭಗ್ನಗೊಳಿಸಲು;
ಸತ್ಯವನ್ನು ನಗ್ನಗೊಳಿಸಲು..
ಮೂಕಳಾದರೆ ಲೋಕವೂ ನೂಕಿಬಿಟ್ಟೀತು……….. ಶಬ್ದವಾಗು “
- ರಾಜ್ಯದ ಹವಾಮಾನ ವರದಿ (Weather Report) 22-05-2022
- ಮುಂಬೈ ಇಂಡಿಯನ್ ಗೆ ರೋಚಕ ಗೆಲುವು – RCB ಸೆಮಿಫೈನಲ್ಸ್ ಗೆ DC ತಂಡ ಟೂರ್ನಿಯಿಂದ ಹೊರಕ್ಕೆ
- ಲೀಯಾ – ಪೀಟರ್ ‘ ಬರ್ತ್ ಡೇ’ ಶಾಪಿಂಗ್ಗೆ ಹೋಗಿದ್ದ ಪ್ರೇಮಿಗಳು : ಯುವಕನಿಂದ ಮಾಹಿತಿ
- ದೇಶದ ಜನತೆಗೆ ಸಿಹಿ ಸುದ್ದಿ:ಪೆಟ್ರೋಲ್, ಗ್ಯಾಸ್, ಸಿಮೆಂಟ್, ಗೊಬ್ಬರ, ಪ್ಲಾಸ್ಟಿಕ್, ಉಕ್ಕು ದರ ಇಳಿಕೆ
- ಕೇಂದ್ರ ಸರ್ಕಾರದಿಂದ ಅಬಕಾರಿ ಸುಂಕ ಇಳಿಕೆ! ಪೆಟ್ರೋಲ್ ಪ್ರತಿ ಲೀಟರ್ ಗೆ ₹ 8 ಡೀಸೆಲ್ ₹ 6 ಕಡಿತ
- ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಲ್ಲೆಸೆದ ಕಿಡಿಗೇಡಿಗಳು-ಬೆಂಡಿಗೇರಿ ಪ್ರಕ್ಷುಬ್ಧ : ಪೊಲೀಸ್ ಬಂದೋಬಸ್ತು
More Stories
ನೇರ ನುಡಿ ಸಾಹಿತಿ ಡಿಎಸ್ ನಾಗಭೂಷಣ್ ನಿಧನ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ಪದಚ್ಯುತಿ
ಕನ್ನಡ ಕವಿಕಣ್ಣಿನ ಯುಗಾದಿ