“ಹೀಗ್ಯಾಕೆ ಸುಮ್ಮನಿದ್ದುಬಿಟ್ಟಿದ್ದೀಯ?
ಮಾತಾಡು,
ಸದ್ದುಬರುವಂತೆ ಪಾದ ಒತ್ತಿ ನಡೆದಾಡು,
ನೀರು ಗುಟುಕರಿಸುವಾಗ ಬೇಕಂತಲೇ ಗಂಟಲು ಕೊಂಕಿಸು,
ಉಸಿರಾಟ ನೆನಪಾದಾಗೆಲ್ಲ ಸ್ವಲ್ಪ ಜೋರಾಗಿ ಉಸಿರೆಳೆದುಕೊ,
ಆಗಾಗ ಕನ್ನಡಿ ನೋಡಿಕೊಂಡು ಮುಖವಿದೆಯಾ ಅಂತ ಖಾತ್ರಿಮಾಡಿಕೊ……….
ನಗುವು ನಿನ್ನದು, ನಡಿಗೆ ನಿನ್ನದು;
ಆಕಳಿಕೆ, ಬಿಕ್ಕಳಿಕೆಗಳೂ ನಿನ್ನವು.
ಇಲ್ಲಿ ಹಠವಿದೆ, ತ್ಯಾಗವಿದೆ,
ಧ್ಯಾನವಿದೆ, ಪರಿಪೂರ್ಣ ಅರ್ಪಣೆಯಿದೆ.
ನೀ ದೇವಿಯಲ್ಲ;
ಬರಿ ಶಕ್ತಿಯಲ್ಲ..
ಮಾನವತೆಯ ಪರಿಪಾಕ.
ನಿನ್ನ ಆತ್ಮ ಸ್ಥೈರ್ಯ ಸಾಂಕ್ರಾಮಿಕವಾಗಬೇಕು
ಮಿಥ್ಯವನ್ನು ಭಗ್ನಗೊಳಿಸಲು;
ಸತ್ಯವನ್ನು ನಗ್ನಗೊಳಿಸಲು..
ಮೂಕಳಾದರೆ ಲೋಕವೂ ನೂಕಿಬಿಟ್ಟೀತು……….. ಶಬ್ದವಾಗು “
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)