ನಾಪತ್ತೆಯಾಗಿದ್ದ ಗಿಣಿ ಪತ್ತೆ : ಹುಡುಕಿಕೊಟ್ಟವರಿಗೆ 85 ಸಾವಿರ ರೂಪಾಯಿ ಬಹುಮಾನ

Team Newsnap
1 Min Read

ತುಮಕೂರಿನ ಕುಟುಂಬವೊಂದು ಮುದ್ದಿನ ಗಿಣಿಯನ್ನು ಕಳೆದುಕೊಂಡಿದ್ದು ಆರು ದಿನಗಳ ಹಿಂದೆ ರುಸ್ತುಮ್ ಎಂಬ ಹೆಸರಿನ ಗಿಣಿ ಮನೆಯಿಂದ ಹಾರಿ ಹೋಗಿದ್ದು,

ಗಿಣಿ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಕರಪತ್ರದ ಮೂಲಕ ಮನವಿ ಮಾಡಿದ್ದರು. ಅಲ್ಲದೆ ಗಿಣಿ ಹುಡುಕಾಟಕ್ಕೆ ತಾವು ಸಹ ಪ್ರಯತ್ನ ನಡೆಸಿದ್ದರು. ಮೈಸೂರು ವಿಮಾನ ನಿಲ್ದಾಣಕ್ಕೆ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು

ಈ ಗಿಣಿ ಈಗ ತುಮಕೂರಿನ ಬಡ್ಡಿಹಳ್ಳಿಯ ತೋಟವೊಂದರ ಮರದ ಮೇಲೆ ಪತ್ತೆಯಾಗಿದೆ.ಬಡ್ಡಿಹಳ್ಳಿಯ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್ ಎಂಬವರು ಈ ಗಿಣಿಯನ್ನು ಪತ್ತೆ ಮಾಡಿದ್ದು, ಕೂಡಲೇ ಗಿಣಿ ಮಾಲೀಕ ಅರ್ಜುನ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 

ಧಾವಿಸಿ ಬಂದ ಅವರು ಈ ಗಿಣಿ ತಮ್ಮದೆಂದು ಖಾತ್ರಿಪಡಿಸಿಕೊಂಡಿದ್ದಾರೆ. ಇದೀಗ ಗಿಣಿ ಹುಡುಕಿಕೊಟ್ಟ ಇಬ್ಬರಿಗೆ 85,000 ರೂಪಾಯಿ ಬಹುಮಾನ ನೀಡಲಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಆಪ್ತನಿಗೆ ED ಶಾಕ್​-ಸುಂದರಿ ಮನೆಯಲ್ಲಿ 20 ಕೋಟಿ ರು ಹಣ ಪತ್ತೆ

ಮೊದಲು 50 ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಲಾಗಿದ್ದರೂ ಜ್ಯೋತಿಷಿಯೊಬ್ಬರ ಸಲಹೆಯಂತೆ ಈ ಮೊತ್ತವನ್ನು ಹೆಚ್ಚಿಸಲಾಯಿತು ಎಂದು ಹೇಳಲಾಗಿದೆ.

Share This Article
Leave a comment