ಶಬರಿಮಲೆಗೆ ಭೇಟಿ ನೀಡಿದ ಸಚಿವೆ ಶೋಭಾ ಕರಂದ್ಲಾಜೆ

Team Newsnap
1 Min Read

ಕೇರಳದ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿನ್ನೆ ಭೇಟಿ ನೀಡಿದ್ದಾರೆ .

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಸಹಕಾರಿ ಸಚಿವೆ ಶೋಭಾ ಕರಂದ್ಲಾಜೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿ , ಇರುಮುಡಿ ಹೊತ್ತು , ಕಪ್ಪು ಬಟ್ಟೆ ಧರಿಸಿ , ಹದಿನೆಂಟು ಮೆಟ್ಟಿಲುಗಳನ್ನು ಏರಿ ಸ್ವಾಮಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ .

ವರ್ಷದಲ್ಲಿ ಕೆಲವೇ ಬಾರಿ ತೆರೆಯುವ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ , ʼಮಂಡಲ ಪೂಜಾ ಮಹೋತ್ಸವಂʼಗಾಗಿ ನವೆಂಬರ್‌ 16ರಿಂದ 27ರವರೆಗೆ ತೆರೆದಿರುತ್ತದೆ .ಕರುನಾಡ ಜಿಲ್ಲೆಗಳ ಕಿರು ಪರಿಚಯ – 17-ದಾವಣಗೆರೆ 

ಜನವರಿ 14ರಂದು ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಮಕರ ಜ್ಯೋತಿಯ ದರ್ಶನ ಆಗಲಿದೆ. ಮಕರ ಜ್ಯೋತಿಯ ಸಂದರ್ಭದಲ್ಲಿ ಇರುಮುಡಿ ಹೊತ್ತ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ.

Share This Article
Leave a comment