ರಸ್ತೆ ಬದಿ ಟೀ ಸವಿದ ಸಚಿವ ಅಶೋಕ್‍ – ಟೀ ಅಂಗಡಿಯಲ್ಲೇ ಪಾಲಿಟಿಕ್ಸ್ ಬಗ್ಗೆ ಚರ್ಚೆ

Team Newsnap
1 Min Read

ಮಂಡ್ಯದ ಮಹಾವೀರ ವೃತ್ತದಲ್ಲಿ ಇಂಡುವಾಳು ಸಚ್ಚಿದಾನಂದ, ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಸಚಿವ ಆರ್.ಅಶೋಕ್ ಟೀ ಸವಿಯುವ ವೇಳೆ ಮುಂಬರುವ ಚುನಾವಣೆಯ ಕುರಿತು ಚರ್ಚೆ ಮಾಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಮಂಡ್ಯದ 7 ಕ್ಷೇತ್ರಗಳಲ್ಲಿ ಗೆಲ್ಲಲು ಏನೆಲ್ಲಾ ಮಾಸ್ಟರ್ ಪ್ಲಾನ್ ಮಾಡಬೇಕೆಂದು ಚರ್ಚಿಸಲಾಯಿತು. ಸರಿಯಾದ ಪ್ಲಾನ್ ಮಾಡಿದರೆ ಮಾತ್ರ ಕಮಲ ಅರಳುತ್ತೆಂಬ ವಿಶ್ವಾಸವಿದೆ. ಅಲ್ಲದೇ ಮುಂಬರುವ ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ನಮ್ಮದೇ ಜಯಭೇರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ವಕೀಲೆ ಜೊತೆ ಅಸಭ್ಯ ವರ್ತನೆ: ಸಿಪಿಐ ವಿರುದ್ದ FIR ದಾಖಲು
ಸುಮಲತಾ ಬೆಂಬಲಿಗ ಇಂಡುವಾಳು ಸಚ್ಚಿದಾನಂದ ಶೀಘ್ರದಲ್ಲೇ ಶ್ರೀರಂಗಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಿ ಬಿಜೆಪಿ ಪಕ್ಷ ಸೇರಲಿದ್ದಾರೆ. ಆ ಸಮಾರಂಭದಲ್ಲಿ ನಾನು ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಮಾತ್ರವಲ್ಲದೇ ಮಂಡ್ಯದಲ್ಲಿ ಇನ್ನಷ್ಟು ಜನ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಈಗಾಗಲೇ ಕೆ.ಸಿ.ನಾರಾಯಣಗೌಡ ಖಾತೆ ತೆರೆದಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ಕ್ಷೇತ್ರದಲ್ಲಿ ಕಮಲ ಅರಳಿದೆ ಎಂದು ಹೇಳಿದ್ದಾರೆ.

Share This Article
Leave a comment