ಮಂಡ್ಯ ಬಿಡಲ್ಲ : ರಾಜಕೀಯ ಇವತ್ತಲ್ಲ, ನಾಳೆ ಬಿಡಬಲ್ಲೆ ಸಂಸದೆ ಸುಮಲತಾ ತಿರುಗೇಟು

Team Newsnap
1 Min Read

ನಾನು ರಾಜಕೀಯ ನಿವೃತ್ತಿಯಾಗಿ ಮಂಡ್ಯ ಬಿಡುವುದಾಗಿ ಒಂದಷ್ಟು ಜನರು ಕನಸು ಕಾಣುತ್ತಿದ್ದಾರೆ. ಆದರೆ ನಾನು ರಾಜಕೀಯ ಬಿಟ್ಟರೂ ಮಂಡ್ಯ ಬಿಡಲ್ಲ ಎಂದು ಸಂಸದೆ ಸುಮಲತಾ ಜಿಲ್ಲೆಯ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದರು. ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯೋಣ – ಸೋತರೆ ಶಿರಚ್ಛೇದನ – ಸುರೇಶ್ ಗೌಡ , CRS ಗೆ LRS ಸವಾಲು

ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ, ಮಂಡ್ಯ ಜನರ ಆಸೆಯಂತೆ ನಾನು ಇಲ್ಲಿಗೆ ಬಂದಿದ್ದೇನೆ ಮಂಡ್ಯ ಬಿಟ್ಟು ಮತ್ತೊಂದು ಕಡೆ ನಾನು ಯಾಕೆ ಹೋಗಬೇಕು? ಕ್ಷೇತ್ರ ಹುಡುಕುತ್ತಿದ್ದೇನೆ ಎಂಬುದು
ಯಾರ ಕನಸು ಗೊತ್ತಿಲ್ಲ. ನಾನು ಮಂಡ್ಯ ಬಿಡುವೆ ಅಂತ ಒಂದಷ್ಟು ಜನ ಕನಸು ಕಾಣುತ್ತಿದ್ದಾರೆ. ಅವರ ಕನಸಿಗೆ ನಾನು ನೀರು ಚೆಲ್ಲುವೆ ಎಂದರು.

ನಾನು ರಾಜಕೀಯಕ್ಕೆ ಬಂದೀರೋದೇ ಮಂಡ್ಯದ ಸಲುವಾಗಿ. ರಾಜಕೀಯದಲ್ಲಿ ಏನೇನೋ ಆಗಬೇಕೋ ಎಂದು ಮಂಡ್ಯಕ್ಕೆ ಬಂದಿಲ್ಲ. ರಾಜಕೀಯ ಬೇಕಾದರೆ ಇವತ್ತಲ್ಲ, ನಾಳೆ ಬಿಡುವೆ ಆದರೆ ಮಂಡ್ಯ ಬಿಡಲ್ಲ ಎಂದು ತಿರುಗೇಟು ನೀಡಿದರು.

Share This Article
Leave a comment