ಮಂಡ್ಯ ಮೂಡಾ ಹಣ ದುರುಪಯೋಗದ ಹಗರಣ : ಕೆಬ್ಬಳ್ಳಿ ಆನಂದ್ ಸೇರಿ ಐವರಿಗೆ 7 ವರ್ಷ ಜೈಲು – ತಲಾ 1 ಕೋಟಿ ದಂಡ

Team Newsnap
1 Min Read

ಮಂಡ್ಯ ಅಭಿವೃದ್ದಿ ಪ್ರಾಧಿಕಾರ 5 ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐವರು ಆರೋಪಿಗಳಿಗೆ ಸಿಬಿಐ ನ್ಯಾಯಾಲಯವು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ.

muda

ಆಪಾದಿತರಾದ ಕೆಬ್ಬಳ್ಳಿ ಆನಂದ, ನಾಗಲಿಂಗಸ್ವಾಮಿ, ಚಂದ್ರಶೇಖರ್ ಹಾಗೂ ಇತರ ಇಬ್ಬರಿಗೆ 7 ವರ್ಷ ಜೈಲು ಹಾಗೂ ತಲಾ 1ಕೋಟಿ ರು ದಂಡವನ್ನು ವಿಧಿಸಿ ಸಿಬಿಐ ನ್ಯಾಯಾಲಯವು ತೀರ್ಪು ನೀಡಿದೆ.

4 ಕೋಟಿ ಆಸ್ತಿವಂತ ಶಿರಾ ನಗರಸಭೆ ಸದಸ್ಯನ ಬಳಿ ಬಿಪಿಎಲ್ ಕಾರ್ಡ್ : ಸದಸ್ಯತ್ವದಿಂದ ವಜಾ

2013 ರಲ್ಲಿ ಮೂಡಾ ನಡೆದ ಹಗರಣದಲ್ಲಿ ಕೆಬ್ಬಳ್ಳಿ ಆನಂದ ಪ್ರಮುಖ ಆರೋಪಿಯಾಗಿ ಬಂಧನಕ್ಕೆ ಒಳಗಾಗಿದ್ದನು. ಮಂಡ್ಯ ಮತ್ತು ರಾಮನಗರ ಮೂಡಾದಲ್ಲಿ ಕೋಟಿಗಟ್ಟಲೆ ಹಣವನ್ನು ಲಪಟಾಯಿಸಿದ ಆರೋಪ ಈ ಗ್ಯಾಂಗ್ ಮೇಲಿದೆ.

ಕಳೆದ 9 ವರ್ಷಗಳ ಕಾಲ ವಿಚಾರಣೆ ನಡೆದು ಈಗ ತೀರ್ಪು ಹೊರ ಬಂದಿದೆ ಹೆಚ್ಚಿನ ಮಾಹಿತಿ ಬರಬೇಕಿದೆ.

Share This Article
Leave a comment