ಮಂಡ್ಯದ ಕೆ.ಎಂ. ದೊಡ್ಡಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ರಾಸುಗಳ ಕಿಚ್ಚು ಹಾಯಿಸುವ ವೇಳೆ ಅಪ್ಪು ಫೋಟೋ ಹಾಕಿ ಸ್ಮರಿಸಿದ್ದು ವಿಶೇಷವಾಗಿತ್ತು.
ರಾಸುಗಳಿಗೆ ಬಣ್ಣ ಬಣ್ಣದ ಬಲೂನುಗಳಿಂದ ಅಲಂಕರಿಸಿದ್ದರು. ವರ್ಷದ ಮೊದಲ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಮಂಡ್ಯದ ರೈತರು ಹಬ್ಬದ ಜೊತೆಗೆ ಅಗಲಿದ ಅಪ್ಪು ಅವರ ಭಾವಚಿತ್ರ ಇಡುವ ಮೂಲಕ ಅಗಲಿದ ಅಪ್ಪುಗೆ ಗೌರವ ಸಲ್ಲಿಸಿದರು .
ಎತ್ತಿನ ಮೇಲೆ ಅಪ್ಪು ಬಾಲ್ಯದ ಫೋಟೋವನ್ನು ಬಿಡಿಸಿದ್ದರು. ಇದರೊಂದಿಗೆ ತಮ್ಮ ಮನೆಯ ರಾಸುಗಳಿಗೆ ಅಂಬರೀಶ್, ಬಿಪಿನ್ ರಾವತ್ ಅಪ್ಪು ಹೆಸರು ಹಾಗೂ ಫೋಟೋಗಳನ್ನು ಹಾಕಿ ಅಪ್ಪುಗೆ ಜೈಕಾರ ಹಾಕಿ ಕಿಚ್ಚು ಹಾಯಿಸಿ ಸಂಭ್ರಮಾಚರಣೆ ಮಾಡಿದರು.