February 23, 2026

Newsnap Kannada

The World at your finger tips!

dc office mandya

ಸೆ. 23 ರಂದು ಮಂಡ್ಯ ಬಂದ್ : ನೀರಿನ ಸಂರಕ್ಷಣೆ ಹೇಗೆ ? ರಾಜ್ಯದ ಮುಂದಿನ ಆಯ್ಕೆಗಳೇನು?

Spread the love

ಮಂಡ್ಯ : ಕಾವೇರಿ ನೀರು ಹರಿಸಲು ಸುಪ್ರೀಂ ಆದೇಶಿಸಿರುವ ಹಿನ್ನೆಲೆಯಲ್ಲಿ ಈ ತೀರ್ಪುರೈತರ ಪಾಲಿಗೆ ಮರಣ ಶಾಸನವಾಗಿದೆ. ಈ ತೀರ್ಪು ಖಂಡಿಸಿ ಸೆಪ್ಟಂಬರ್ 23 ರಂದು ಮಂಡ್ಯಬಂದ್ ಗೆ ಕರೆ ನೀಡಲಾಗಿದೆ.

ನ್ಯೂಸ್ ಸ್ನ್ಯಾಪ್ Podcast

ಮಂಡ್ಯ ಜಿಲ್ಲಾ ರೈತ ಹಿರಕ್ಷಣಾ ಸಮಿತಿ ಈ ನಿರ್ಧಾರವನ್ನು ಪ್ರಟಿಸಿ, ಬಂದ್ ರೂಪ ರೇಷೆಗಳ ಬಗ್ಗೆ ನಾಳೆ ವಿವಿಧ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಸಮಿತಿಯು ತಿಳಿಸಿದೆ.

ರಾಜ್ಯ ಸರ್ಕಾರಕ್ಕೆ ಬಿಸಿ ತುಪ್ಪ ಆಗಿರುವ ಸುಪ್ರೀಂ ತೀರ್ಪು ಕರಾಳವಾಗದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರಿಹಾರ ಮಾರ್ಗಗಳನ್ನು ಕಂಡು ಕೊಳ್ಳಬೇಕಿದೆ. ಅಲ್ಲದೆ ನೀರಿನ ಸಂರಕ್ಷಣೆ ಮಾಡಲು ಕೆಲವು ಪರಿಹಾರ ಆಯ್ಕೆಗಳನ್ನು ಮಾಡಬೇಕು.

ದಾರಿಗಳು ಯಾವವು ?

1) ‘ಸುಪ್ರೀಂ’ ಸೂಚನೆಯಂತೆ 15 ದಿನ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು
ಸುಪ್ರೀಂಕೋರ್ಟ್ ಆದೇಶದ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು.

2) ಮರು ಪರಿಶೀಲನಾ ಅರ್ಜಿ ವಿಚಾರಣೆ ತ್ರಿಸದಸ್ಯ ಪೀಠದ ಜಸ್ಟೀಸ್ ಬಿ.ಆರ್.ಗವಾಯಿ ಪೀಠವೇ ಮರು ಪರಿಶೀಲನೆಯ ವಿಚಾರಣೆ ನಡೆಸಲಿದೆ ಮರುಪರಿಶೀಲನಾ ಅರ್ಜಿಗೆ ಯಾವುದೇ ಮನ್ನಣೆ, ಮಾನ್ಯತೆ ಸಿಗಲ್ಲ

3) ಕಾವೇರಿ ನೀರು ಪ್ರಾಧಿಕಾರಕ್ಕೂ ಮರುಪರಿಶೀಲನೆ ಅರ್ಜಿ ಸಲ್ಲಿಸಬಹುದು

4) ಕಾವೇರಿ ನೀರು ಬಿಡುಗಡೆಯನ್ನು ನಿಲ್ಲಿಸಿ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು

5) 1991ರಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ಬಂಗಾರಪ್ಪನವರು ಸಿಎಂ ಸ್ಥಾನ ಕಳೆದುಕೊಂಡಿದ್ದರು

6) ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗದಂತೆ ನೀರು ಬಿಡಬೇಕಿದೆ

7) ಆದೇಶ ಉಲ್ಲಂಘಿಸಿದ್ರೆ ತಮಿಳುನಾಡು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದು . ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ಮೇಲೆ ನ್ಯಾಯಾಂಗ ನಿಂದನೆ ಆರೋಪ ಬರಬಹುದು

error: Content is protected !!