ಮದ್ದೂರು : ಕೋರ್ಟ್ ವಾರೆಂಟ್ ಆರೋಪಿಗೆ ನೀಡಲು 1500 ರು ಲಂಚ ಸ್ವೀಕರಿಸಿದ ಮುಖ್ಯ ಪೇದೆ ACB ಬಲೆಗೆ

Team Newsnap
1 Min Read

ಚೆಕ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕೋರ್ಟ್ ವಾರೆಂಟ್ ತಲುಪಿಸಲು ಮದ್ದೂರು ಪೋಲಿಸ್ ಠಾಣೆ ಮುಖ್ಯಪೇದೆ ಶ್ರೀಕಾಂತ್ , ಫಿರ್ಯಾದಿ ದಾರರಿಂದ 1500 ಲಂಚ ಸ್ವೀಕರಿಸುವ ಮುನ್ನ ACB ಬಲೆಗೆ ಬಿದ್ದಿದ್ದಾರೆ

ಎಸಿಬಿ SP ಸಜಿತ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಮದ್ದೂರು ಕೋರ್ಟ್ ನ ಹೊರ ಆವರಣದಲ್ಲಿ ಮುಖ್ಯ ಪೇದೆ ಶ್ರೀಕಾಂತ್ 1500 ರು ಲಂಚ ಸ್ವೀಕರಿಸುವ ಮುನ್ನ ಬಲೆಗೆ ಬಿದ್ದರು

ಮದ್ದೂರಿ ನ ಸಿವಿಲ್ ಕಿರಿಯ ಶ್ರೇಣಿ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಬೋರೇಗೌಡ ಎಂಬುವವರ ವಿರುದ್ದ ಚೆಕ್ ಬೌನ್ಸ್ ಪ್ರಕರಣ ಕುರಿತು ಮೊಕದ್ದಮೆ ಹೂಡಲಾಗಿತ್ತು. ಇದನ್ನು ಓದಿ – ಮಾಜಿ ಸಿಎಂ ಹೆಚ್​ಡಿ ಕೆ ಬೆಂಗಾವಲು ವಾಹನ ಅಪಘಾತ- ಮೂವರಿಗೆ ಗಾಯ

ಈಸಂಬಂಧ ನ್ಯಾಯಾಲಯದ ವಾರೆಂಟ್ ಅನ್ನು ಬೋರೇಗೌಡನಿಗೆ ನೀಡಲು ಮುಖ್ಯಪೇದೆ ಶ್ರೀಕಾಂತ್ ಲಂಚಕ್ಕೆ ಬೇಡಿಕೆ ಇಟ್ಟು 1500 ರು ಲಂಚ ಪಡೆಯುವ ಮುನ್ನ ಎಸಿಬಿ ಗೆ ಸಿಕ್ಕಿಹಾಕಿ ಕೊಂಡಿದ್ದಾನೆ

ಲಂಚ ಪಡೆದ ಶ್ರೀಕಾಂತ್ ನನ್ನು ಬಂಧಿಸಿದ ಎಸಿಬಿ ಪೊಲೀಸರು ಲಂಚದ ಮೊತ್ತವನ್ನು ವಶಕ್ಕೆ ಪಡೆದಿದ್ದಾರೆ.

Share This Article
Leave a comment