ದೇವನಹಳ್ಳಿಯಲ್ಲಿ ಪ್ರಿಯಕರನ ಜೊತೆ ಪ್ರಿಯತಮೆ ನೇಣಿಗೆ ಶರಣು

Team Newsnap
1 Min Read

ಗಂಡನನ್ನು ತೊರೆದು ಬಂದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾದ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

ರಾಯಚೂರು ಮೂಲದ ಬಸವರಾಜು (28) ಹಾಗೂ ಜ್ಯೋತಿ (26) ಮೃತರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಶಾಂತಿ ನಗರದಲ್ಲಿ ಈ ಘಟನೆ ನಡೆದಿದೆ.

ಕಳೆದ 20 ದಿನಗಳ ಹಿಂದೆ ದೇವನಹಳ್ಳಿಯ ಶಾಂತಿ ನಗರದಲ್ಲಿ ಬಾಡಿಗೆ ಮನೆ ಪಡೆದು ಗಂಡ-ಹೆಂಡತಿ ಎಂದು ಇಬ್ಬರು ವಾಸವಾಗಿದ್ದರು. ಆದರೆ ಕಳೆದ ಭಾನುವಾರದಿಂದ ಮನೆಯಿಂದ ಇಬ್ಬರು ಹೊರಬಂದಿಲ್ಲ. ಅಕ್ಕ ಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಾಗಿಲು ತೆರೆದು ನೋಡಿದಾಗ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment