Categories: Main News

ನಿಂಬೆ ಸ್ವಾಮಿ ಮಠ……

ಹೀಗೂ ಉಂಟೆ………

ಚಿಕ್ಕ ವಯಸ್ಸಿನಲ್ಲಿ ನನಗೆ ಅತಿಯಾಗಿ ಹಸಿ ಮಣ್ಣು ತಿನ್ನುವ ಅಭ್ಯಾಸವಿತ್ತು,

ಅಪ್ಪಾ ಅಮ್ಮ ಎಷ್ಟೇ ಹೊಡೆದರೂ ಆ ಅಭ್ಯಾಸ ನಿಲ್ಲಲಿಲ್ಲ. ಆರೋಗ್ಯವೂ ಚೆನ್ನಾಗಿತ್ತು,

ನಂತರದ ದಿನಗಳಲ್ಲಿ ನಿಂಬೆ ಹಣ್ಣು ತಿನ್ನುವ ಅಭ್ಯಾಸ ಶುರುವಾಯಿತು,

ಪ್ರತಿನಿತ್ಯವೂ ಬೇಬಿನಲ್ಲಿ ನಿಂಬೆ ಹಣ್ಣು ತುಂಬಿರುತ್ತಿದ್ದವು,
ಮನೆಯಲ್ಲಿ – ಅಕ್ಕಪಕ್ಕದವರ ತೋಟಗಳಲ್ಲಿ ನಿಂಬೆ ಹಣ್ಣು ಕದಿಯುತ್ತಿದ್ದೆ,

ನನ್ನ ಬಗ್ಗೆ ತಿಳಿದಿದ್ದ ಕೆಲವರು ಗದರಿಸುತ್ತಿದ್ದರೂ ಹೆಚ್ಚಿನ ತೊಂದರೆ ಕೊಡುತ್ತಿರಲಿಲ್ಲ,

ಒಮ್ಮೆ ಒಂದು ಹೆಂಗಸು ಜಗಲಿ ಕಟ್ಟೆಯ ಮೇಲೆ ಕುಳಿತು ತುಂಬಾ ಹೊಟ್ಟೆ ನೋವಿನಿಂದ ನರಳುತ್ತಿತ್ತು,

ನಾನು ಅದನ್ನು ನೋಡಿ ತಡೆಯಲಾರದೆ ಜೇಬಿನಲ್ಲಿದ್ದ ನಿಂಬೆಹಣ್ಣುನ್ನು ಆಕೆಗೆ ತಿನ್ನಿಸಿದೆ,

ಆಶ್ಚರ್ಯ, ಆಕೆಯ ಹೊಟ್ಟೆನೋವು ಮಾಯ.
ಆಕೆಯಿಂದ ನನಗೆ ಹೊಗಳಿಕೆಯ ಮಹಾಪೂರ,

ಹೀಗೆ ಇನ್ನೊಮ್ಮೆ ರೈತರೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅದನ್ನು ಗಮನಿಸಿದ
ನಾನು ಜೇಬಿನಿಂದ ನಿಂಬೆ ಹಣ್ಣು ತೆಗೆದು ದೇವರಿಗೆ ವಂದಿಸಿ ಅವರಿಗೆ ನೀಡಿದೆ‌,

ಅರೆ ಮತ್ತೂ ಆಶ್ಚರ್ಯ. ಅವರ ನೋವು ಕಡಿಮೆಯಾಯಿತು.
ಅವರು ಈ ವಿಷಯವನ್ನು ಊರಿನಲ್ಲೆಲ್ಲಾ ಹೇಳಿಕೊಂಡು ತಿರುಗಾಡಿದರು,

ಕೆಲವರು ನನ್ನ ಬಳಿ ಬಂದು ನಾನು ದೇವರಿಗೆ ಮಂತ್ರಿಸಿದ ನಿಂಬೆ ಹಣ್ಣು ಪಡೆದು ಹೋಗತೊಡಗಿದರು,

ಇದು ಬರಬರುತ್ತಾ ಹೆಚ್ಚಾಯಿತು. ಒಂದಕ್ಷರವೂ ತಲೆಗೆ ಹತ್ತದ ನನಗೆ ನಿಂಬೆ ಹಣ್ಣು ಕೊಡುವುದೇ ಕೆಲಸವಾಯಿತು,

ಜನ ಮನೆಯ ಬಳಿಗೇ ಬರತೊಡಗಿದರು.
ಈಗ ನಿಂಬೆ ಹಣ್ಣಿಗೆ ಹರಿಶಿನ, ಕುಂಕುಮ ಹಚ್ಚಿ ಕೊಡತೊಡಗಿದೆ,

ಜನ ಅದಕ್ಕಾಗಿ ತಮಗೆ ತೋಚಿದಷ್ಟು ಹಣ ಕೊಡತೊಡಗಿದರು,

ಹೊಟ್ಟೆನೋವಿನ ಜೊತೆಗೆ ಸಣ್ಣಪುಟ್ಟ ತಲೆನೋವು, ಜ್ವರ, ಮಕ್ಕಳ ಖಾಯಿಲೆಗೂ ನನ್ನಬಳಿ
ಬರತೊಡಗಿದರು,

ಪ್ರತಿನಿತ್ಯ ನನಗೆ ಇದೇ ಕೆಲಸವಾಯಿತು. ನನ್ನ ಆದಾಯವೂ ಹೆಚ್ಚಿತು.

ಮುಂದೆ ಇದೇ ಹಣದಲ್ಲಿ ಮನೆಯ ಹತ್ತಿರವೇ ಒಂದು ಕಾಳಿಮಾತೆಯ ವಿಗ್ರಹ ಕೂಡಿಸಿ,
ದೇವಸ್ಥಾನವನ್ನು ಕಟ್ಟಿಸಿದೆ,

ಸುತ್ತಮುತ್ತಲಿನ ಊರಿನಲ್ಲೆಲ್ಲಾ ನನ್ನ ಹೆಸರು ಹರಿದಾಡತೊಡಗಿತು,

ನನ್ನ ಕೈಗುಣದ ಬಗ್ಗೆ ಎಲ್ಲಾ ಕಡೆಯೂ ಚರ್ಚೆಯಾಗತೊಡಗಿತು,

ಟಿವಿಯಲ್ಲಿ ನನ್ನ ಬಗ್ಗೆ ಒಂದು ಕಾರ್ಯಕ್ರಮವೂ ಪ್ರಸಾರವಾಯಿತು,

ಜನರೆಲ್ಲಾ ಸೇರಿ ನನಗೆ “ಶ್ರೀ ಶ್ರೀ ಶ್ರೀ ಕೈಗುಣಾನಂದ ಸ್ವಾಮಿ “ಎಂದು ಹೆಸರಿಸಿದರು,

ನನ್ನ ದೇವಸ್ಥಾನ ಈಗ “ನಿಂಬೆ ಸ್ವಾಮಿ ಮಠ “ಆಯಿತು,

ನಂಬಿಕೆ, ಭಕ್ತಿ, ಭಕ್ತರು ಹೆಚ್ಚಾದರು,

ನಾನೀಗ ನಿಂಬೆ ಸ್ವಾಮಿ ಮಠದ ಜಗದ್ಗುರು.
ಅನೇಕ ಸಭೆ ಸಮಾರಂಭಗಳಿಗೆ ಅತಿಥಿ.

ಅನೇಕ ಖ್ಯಾತ ರಾಜಕಾ ರಣಿಗಳು, ಉದ್ಯಮಿಗಳು, ಸಿನಿಮಾ ನಟನಟಿಯರು ನನ್ನ ಮಠದ ಭಕ್ತರಾಗಿದ್ದಾರೆ,

ನಿಮಗೂ ಆಸಕ್ತಿ, ಭಕ್ತಿ ಇದ್ದರೆ ನಿಂಬೆ ಸ್ವಾಮಿ ಮಠಕ್ಕೆ ಒಮ್ಮೆ ಭೇಟಿ ಕೊಡಿ,

ಸಲಹೆ ಉಚಿತ – ಪರಿಹಾರ ಖಚಿತ…..,……,…….

ಜನ ಮರುಳೋ ಜಾತ್ರೆಯ ಮರುಳೋ……

ಪ್ರಜಾಪ್ರಭುತ್ವ ಬೇರುಗಳನ್ನು ಹುಡುಕುತ್ತಾ…….

ಜನರ ಜಾಗೃತಿಗಾಗಿ.

  • ವಿವೇಕಾನಂದ ಎಚ್ ಕೆ
Team Newsnap
Leave a Comment
Share
Published by
Team Newsnap

Recent Posts

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024

ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ‘ಕಾರ್ತಿಕ್’ ನಾಪತ್ತೆ

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More

May 2, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More

May 2, 2024

ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್‌ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More

May 2, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 1, 2024

2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್‍ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More

April 30, 2024