ಲವ್ ಜಿಹಾದ್ ವಿರುದ್ಧ ಕಾನೂನು ಸಿಎಂ ಯೋಗಿ ಆದಿತ್ಯನಾಥ್ ಪ್ರಕಟ

Team Newsnap
1 Min Read
credits - ANI

ಅಂತರ್​ ಧರ್ಮಿಯ ಮದುವೆಗಾಗಿ ಬಲವಂತವಾಗಿ ಮತಾಂತರ ನಡೆಸಿದರೆ ಅವರನ್ನು ‘ರಾಮ ನಾಮ ಸತ್ಯ ಪ್ರಯಾಣ’ಕ್ಕೆ ಕಳುಹಿಸಿಕೊಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸಿಂಗ್​ ಎಚ್ಚರಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೇ , ರಾಜ್ಯದಲ್ಲಿ ‘ಲವ್​ ಜಿಹಾದ್’​ ತಡೆಯಲು ಸರ್ಕಾರ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಕಾನೂನು ತರುವುದಾಗಿ ತಿಳಿಸಿದ್ದಾರೆ.

ವಿವಾಹದ ಸಂದರ್ಭದಲ್ಲಿ ಮತಾಂತರ ಅಗತ್ಯವಿಲ್ಲ ಎಂದು ಅಲಹಾಬಾದ್​ ಹೈ ಕೋರ್ಟ್​ ತಿಳಿಸಿದೆ. ಈ ಹೇಳಿಕೆ ಬೆನ್ನಲ್ಲೇ ಇಂದು ಮಾತನಾಡಿರುವ ಸಿಎಂ ಆದಿತ್ಯನಾಥ, ಲವ್​ ಜಿಹಾದ್​ ತಡೆಯಲು ಸರ್ಕಾರ ಕೆಲಸ ಮಾಡುತ್ತದೆ. ಗುರುತು ಮರೆ ಮಾಚಿ ನಮ್ಮ ಸಹೋದರರಿಯರ ಗೌರವದ ವಿರುದ್ಧ ಆಟವಾಡುವವರು, ಇನ್ನಾದರೂ ತಮ್ಮ ದಾರಿ ಸರಿಪಡಿಸಿಕೊಳ್ಳದಿದ್ದರೆ, ಅವರಿಗೆ ರಾಮ್​ ನಾಮ್​​ ಸತ್ಯ ಪ್ರಯಾಣ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ ಹೇಳಿಕೆ ಬಗ್ಗೆ ಕೊನೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ಲವ್​ ಜಿಹಾದ್’​ ಮಾಫಿಯಾದಲ್ಲಿ ತೊಡಗಿರುವ ಅಪರಾಧಿಗಳಿಗೆ ಈ ಎಚ್ಚರಿಕೆ ಎಂದಿದ್ದಾರೆ.

ಮದುವೆ ಕಾರಣದಿಂದಾಗಿ ಧರ್ಮ ಬದಲಾಯಿಸಿಕೊಳ್ಳುವುದು ಮಾನ್ಯವಲ್ಲ ಎಂದು ಅಲಹಾಬಾದ್​ ಕೋರ್ಟ್​ ತಿಳಿಸಿದೆ. ನವ ದಂಪತಿಗಳ ಪ್ರಕರಣವೊಂದರಲ್ಲಿ ಈ ಹೇಳಿಕೆ ನೀಡಿದ್ದು, ಅವರ ಅರ್ಜಿ ವಜಾಗೊಳಿಸಲಾಗಿದೆ.

ಅಂತರ್​ ಧರ್ಮಿಯ ಮದುವೆಯಿಂದ ತೊಡಗು ಉಂಟಾಗಬಹುದು ಎಂದು ಪೊಲೀಸರಿಗೆ ನಿರ್ದೇಶಿಸಲು ಯುವತಿಯ ತಂದೆ ನ್ಯಾಯಾಲಯ ಮೊರೆ ಹೋಗಿದ್ದರು.

ಬಲಪಂಥೀಯ ಗುಂಪುಗಳ ಪ್ರಕಾರ ‘ಲವ್​ ಜಿಹಾದ್’​ ಎಂಬುದು ಪಿತೂರಿಯಾಗಿದೆ. ಮುಸ್ಲಿಂ ಸಮುದಾಯಕ್ಕೆ ಮಹಿಳೆಯರನ್ನು ಮತಾಂತರಗೊಳಿಸುವ ಉದ್ದೇಶದಿಂದ ತಮ್ಮ ನಿಜ ವ್ಯಕ್ತಿತ್ವ ಮರೆಮಾಚಿ ಅವರನ್ನು ಕೆಲವು ಯುವಕರು ಮದುವೆಯಾಗುತ್ತಾರೆ ಎನ್ನಲಾಗಿದೆ.

Share This Article
Leave a comment