Main News

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ – ಹತ್ತು ಲಕ್ಷ ಹೂವಿನಲ್ಲಿ ಎದ್ದುನಿಲ್ಲಲಿದೆ ವಿಧಾನಸೌಧ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಎಂದಿನಂತೆ ಈ ವರ್ಷವೂ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ರಾಜಧಾನಿ ಸಜ್ಜಾಗಿದೆ. ಹತ್ತು ಲಕ್ಷ ಹೂಗಳಿಂದ ನಿರ್ಮಾಣಗೊಳ್ಳುತ್ತಿರುವ ವಿಧಾನ ಸೌಧದ ಪ್ರತಿಕೃತಿ ಈ ಬಾರಿಯ ಮುಖ್ಯ ಆಕರ್ಷಣೆಯಾಗಲಿದೆ.ಆಗಸ್ಟ್ 4 ರಿಂದ 12 ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದೆ.

ಲಾಲ್‌ಬಾಗ್‌ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ, ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ ಕೊಡುಗೆಯ ಗೌರವಾರ್ಥವಾಗಿ ಗಾಜಿನ ಮನೆಯಲ್ಲಿ ವಿಧಾನಸೌಧದ ಪ್ರತಿಕೃತಿಯನ್ನು ನಿರ್ಮಿಸಲಾಗುತ್ತಿದೆ. ವಿಧಾನಸೌಧದ ಪ್ರತಿಕೃತಿಯನ್ನು ತಯಾರಿಸಲು ಎರಡು ಲಕ್ಷ ಸೇವಂತಿಗೆ ಮತ್ತು 5.2 ಲಕ್ಷ ಗುಲಾಬಿ ಮತ್ತು ಶಿವಪುರ ಸತ್ಯಾಗ್ರಹ ಸೌಧ ಮಾಡಲು 3 ಲಕ್ಷ ಸೇವಂತಿಗೆ ಬಳಸಲಾಗುವುದು ಎಂದು ವಿವರಿಸಿದರು.

ಕೆಂಗಲ್ ಹನುಮಂತಯ್ಯ ಈ ಬಾರಿ ಫಲಪುಷ್ಪ ಪ್ರದರ್ಶನದ ಥೀಮ್ ಆಗಿರಲಿದ್ದು, ಅವರ ಕಾಲದಲ್ಲಿ ನಿರ್ಮಿಸಿದ ವಿಧಾನಸೌದ ಹೂಗಳಿಂದಲೇ ಎದ್ದು ನಿಲ್ಲಲಿದೆ. ಜೊತೆಗೆ ಕೋಲಾರದ ಚಿನ್ನದ ಗಣಿಯೂ ಸಹ ಸಾರ್ವಜನಿಕರ ಗಮನ ಸೆಳೆಯಲಿದೆ.

ಫಲಪುಷ್ಪ ಪ್ರದರ್ಶನಕ್ಕಾಗಿ ನೀಲಗಿರಿ, ಪುಣೆ, ತಿರುವನಂತಪುರಂ ಹಾಗೂ ಕೇರಳದಿಂದ ಹೂಗಳನ್ನು ತರಿಸಲಾಗುತ್ತಿದ್ದು, ಪ್ರದರ್ಶನದ ನಿರ್ವಹಣೆಗಾಗಿ 13 ಸಮಿತಿಗಳನ್ನು ರಚಿಸಲಾಗಿದೆ. ಭದ್ರಾವತಿ (VISL) ಕಬ್ಬಿಣ ಕಾರ್ಖಾನೆಗೆ ಸುವರ್ಣ ಯುಗ ಆರಂಭ

12 ದಿನಗಳ ಪ್ರದರ್ಶನಕ್ಕೆ 2.5 ಕೋಟಿ ರೂ.ವಿಧಾನ ಸೌಧದ ಪ್ರತಿಕೃತಿ ನಿರ್ಮಿಸಲು 5 ಲಕ್ಷ ಗುಲಾಬಿ ಹೂ, ಶಿವಪುರ ಸತ್ಯಾಗ್ರಹ ಸೌಧ ನಿರ್ಮಿಸಲು 3 ಲಕ್ಷ ಸೇವಂತಿಗೆ ಹೂ ಬಳಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

Team Newsnap
Leave a Comment

Recent Posts

ಪಾದಚಾರಿಗಳ ಮೇಲೆ ಬೈಕ್ ಹರಿದು ನಾಲ್ವರು ಸಾವು

ವಿಜಯಪುರ: ಮೂತ್ರ ವಿಸರ್ಜನೆಗೆಂದು ರಸ್ತೆ ದಾಟುತ್ತಿದ್ದ ಯುವಕರ ಮೇಲೆ ಬೈಕ್ ಹರಿದು ಜಾತ್ರೆಗೆಂದು ಬಂದ ಯುವಕರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ… Read More

September 6, 2024

ಇದು ಸಮರ್ಥನೆಯಲ್ಲ..! ನೇರ ನುಡಿ..!

ಶಿಕ್ಷಣ ಮತ್ತು ವ್ಯವಸ್ಥೆ "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ".. ಮೊದಲನೆಯಯದಾಗಿ ನನಗೆ ವಿದ್ಯೆ ಕಲಿಸಿ ಸಮಾಜದಲ್ಲಿ ಒಂದು ಉತ್ತಮವಾಗಿ… Read More

September 5, 2024

ಗುರು ಎಂಬೊ ಅರಿವಿನ ವಿಸ್ತಾರ….

'ಗುರುವಿನ ಗುಲಾಮನಾಗುವ ತನಕದೊರೆಯದಣ್ಣ ಮುಕುತಿ".ಎಂದು ಪುರಂದರದಾಸರು ಗುರುವಿನ ಮಹಿಮೆಯನ್ನು ಬಹು ಹಿಂದೆಯೇ ಹೇಳಿದ್ದಾರೆ,  ಪ್ರಾಚೀನ ಕಾಲದಲ್ಲಿ ಗುರು ತನ್ನ ಶಿಷ್ಯನಿಗೆ  ತನ್ನ… Read More

September 5, 2024

ನಿಸ್ವಾರ್ಥ ಜೀವಿ ಜ್ಞಾನದ ಭುವಿ

"ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ"ಎಂಬಂತೆ ವಿದ್ಯಾರ್ಥಿಗಳು ಗುರುವಿನ ಗುಲಾಮನಾದಾಗಲೇ ಅಪ್ರತಿಮ ಬದುಕು ರೂಪಿಸಿಕೊಳ್ಳುವನು ಎಂಬುದು ಅಕ್ಷರಶಃ ಸತ್ಯ.ಅಕ್ಷರಗಳ ಕಲಿಸುತ… Read More

September 5, 2024

ಸಿದ್ದರಾಮಯ್ಯ ನ್ಯಾಯಾಲಯದ ತೀರ್ಪು ಬರುವ ಮೊದಲು ರಾಜೀನಾಮೆ ನೀಡಲಿ: ಬಿ ಎಸ್ ಯಡಿಯೂರಪ್ಪ

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಲಯದ ತೀರ್ಪು ಬರುವ ಮೊದಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಮಾಜಿ ಸಿಎಂ… Read More

September 5, 2024

ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್ ಜೋಡಿ

ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಸಂತಸದ ಸುದ್ದಿಯನ್ನು ಡಾರ್ಲಿಂಗ್… Read More

September 5, 2024