ಆಂತರಿಕ ಭದ್ರತಾ ಎಡಿಜಿಪಿ ಭಾಸ್ಕರ್ ರಾವ್ ಮಂಡ್ಯದ ಕೆ.ಆರ್.ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಲಾಶಯದ ಭದ್ರತೆ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸಲಹೆ ನೀಡಿದರು.
ಇದೇ ವೇಳೆ ಆಣೆಕಟ್ಟಿನ ಭದ್ರತಾ ಉಸ್ತುವಾರಿ, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಅಧಿಕಾರಿಗಳಿಂದ, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನೀಯರ್ ವಾಸುದೇವ ಅವರಿಂದ ಆಣೆಕಟ್ಟು ಭದ್ರತೆಯ ಬಗ್ಗೆ ಮಾಹಿತಿ ಪಡೆದರು.
ಸ್ಥಳದಲ್ಲಿ ಕೆ ಆರ್ ಎಸ್ ಇನ್ಸ್ಪೆಕ್ಟರ್ ನ ಪ್ರದೀಪ್, ರಾಘವೇಂದ್ರ, ಜಗದೀಶ್, ಸ್ವಾಮಿ, ಪಿಎಸ್ಐ ನವೀನ್ ಗೌಡ ಉಪಸ್ಥಿತರಿದ್ದರು.