ಇದನ್ನು ಓದಿ :ಖಿನ್ನತೆಗೆ ಒಳಗಾದ ನಟಿಯೊಬ್ಬಳು ಲೈವ್ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆಗೆ ಶರಣು
ಬುಧವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 100.95 ಅಡಿ ದಾಖಲಾಗಿತ್ತು. 5,396 ಕ್ಯುಸೆಕ್ ಒಳಹರಿವು, 1,065 ಕ್ಯುಸೆಕ್ ಒಳಹರಿವು ಇದೆ. ಕಳೆದ ವರ್ಷ ಇದೇ ವೇಳೆಗೆ 86.80 ಅಡಿ ನೀರು ಸಂಗ್ರವಾಗಿತ್ತು, ಅಕ್ಟೋಬರ್ 2 ರಂದು ಗರಿಷ್ಠ 124.80 ಅಡಿ ತಲುಪಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿದ್ದರು.
ತಡವಾಗಿ ಭರ್ತಿಯಾಗಿದ್ದ ಕಾರಣ ಇಳಿಮುಖವಾಗುತ್ತಾ ಬಂದಿದ್ದ ನೀರಿನ ಮಟ್ಟ ಏಪ್ರಿಲ್ 30ರಂದು 99.50 ಅಡಿಗೆ ಬಂದಿತ್ತು, ಮೇ 25ರಂದು ಮತ್ತೆ 100 ಅಡಿಗೆ ತಲುಪಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ದಾರಾಕಾರ ಮಳೆ ಸುರಿಯುತ್ತಿರುವ ಕಾರಣ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.
‘ಈ ವರ್ಷ ಬೇಸಿಗೆಯಲ್ಲೂ ಉತ್ತಮ ನೀರಿನ ಸಂಗ್ರಹವಾದ ಕಾರಣ ಕಟ್ಟು ಪದ್ಧತಿಯಲ್ಲಿ ರೈತರ ಬೆಳೆಗಳಿಗೂ ನೀರು ಹರಿಸಲಾಗುತ್ತಿತ್ತು. ಕಡಿಮೆಯಾಗುತ್ತಿದ್ದ ನೀರಿನ ಮಟ್ಟ ಮಳೆಯ ಕಾರಣದಿಂದ ಹೆಚ್ಚಾಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಕೆಆರ್ಎಸ್ ಜಲಾಶಯದ ನೀರಿನ ಮಟ್ಟ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು