ಮಂಗಳವಾರ ಹೃದಯಾಘಾತದಿಂದ ನಿಧನರಾದ ಹಿರಿಯ ನಟ ಕೃಷ್ಣೇಗೌಡರಿಗೆ ಮಗನ ಸಾವಿನ ಸಂಗತಿ ತಿಳಿಯದೇ ಜೀವನದ ಕೊನೆ ಕ್ಷಣ ಕೂಡ ಅತ್ಯಂತ ದುಃಖದಿಂದ ಕೂಡಿತ್ತು.
ಕೇವಲ 20 ದಿನಗಳ ಹಿಂದೆ ನಟ ಕೃಷ್ಣೇಗೌಡ ಹಾಗೂ ಅವರ ಎರಡನೇ ಪುತ್ರ ಸತೀಶ್ ಗೆ ಕೊರೋನಾ ಸೋಂಕು ತಗುಲಿತು.
ಕೃಷ್ಣೇಗೌಡರು ಕೊರೋನಾದಿಂದ ಬಚಾವ್ ಆದರು. ಆದರೆ ಕೊರೋನಾ ಸೋಂಕು ಶ್ವಾಸಕೋಶವನ್ನು ಆವರಿಸಿದ್ದರಿಂದ ಕೃಷ್ಣೇಗೌಡರನ್ನು ಐಸಿಯುನಲ್ಲೇ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಮಗ ಸತೀಶ್ ಕೊರೋನಾಗೆ ಬಲಿಯಾಗಿ ಹೋದರು. ಮಗ ಸಾವನ್ನಪ್ಪಿದ ಸುದ್ದಿಯನ್ನು ಐಸಿಯುನಲ್ಲಿ ಇದ್ದ ಗೌಡರಿಗೆ ಹೇಳಲಿಲ್ಲ. ಹೀಗಾಗಿ ಮಗನ ಸಾವಿನ ಸುದ್ದಿಯೂ ಸಹ ಅಪ್ಪನಿಗೆ ಗೊತ್ತಾಗದೇ ಕೊನೆಯುಸಿರೆಳೆದರು.
ಚಿತ್ರರಂಗದಲ್ಲಿ ಹೋರಾಟದ ಬದುಕನ್ನು ಕಟ್ಟಿಕೊಂಡಿದ್ದ ಕೃಷ್ಣೇಗೌಡರು, ಕೊನೆಯ ಕ್ಷಣವೂ ದುರಂತದಿಂದಲೇ ಕೂಡಿತ್ತು ಎಂಬ ಸಂಗತಿ ಈಗ ಬಯಲಾಗಿದೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ