ಮಳವಳ್ಳಿಯಲ್ಲಿ ಬಂದ್ ನೀರಸ: ಜನ ಜೀವನ ಯಥಾಸ್ಥಿತಿ

Team Newsnap
1 Min Read

ವಿವಿಧ ಪರ ಸಂಘಟನೆಗಳು
ತೀವ್ರ ವಿರೋಧದ ನಡುವೆಯೂ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದಲ್ಲದೆ ಅದಕ್ಕೆ ಐವತ್ತು ಕೋಟಿ ರು ಅನುದಾನ ನೀಡಿರುವ ರಾಜ್ಯದ ಮುಖ್ಯಮಂತ್ರಿ
ಬಿ.ಎಸ್ ಯಡಿಯೂರಪ್ಪ ನಡೆಗೆ ವಿವಿಧ ಪರ ಸಂಘಟನೆ ಗಳು ಕರೆ ನೀಡಿದ್ದ ಬಂದ್ ಮಳವಳ್ಳಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟು ನಡೆಸಿವೆ. ಜನ ಸಾಮಾನ್ಯ ಜೀವನ ಎಂದಿನಂತೆ ಇದೆ.

malavalli1

ಪಟ್ಟಣದ ಸಾರಿಗೆ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಊರುಗಳಿಗೂ ಬಸ್ ಸಂಚಾರ ಯಾವುದೇ ತೊಂದರೆಯಿಲ್ಲದೆ ಸಾಗದೆ. ಅಲ್ಲದೆ ಆಟೋ ಕ್ಯಾಬ್ ಮ್ಯಾಕ್ಸಿಕ್ಯಾಬ್ ಗೂಡ್ಸ್ ಗಾಡಿಗಳು ಎಂದಿನಂತೆ ಸಂಚಾರವನ್ನು ಆರಂಭಿಸಿದವು .

ಪಟ್ಟಣದ ಹೋಟೆಲ್ ಗಳು ಬೇಕರಿಗಳು ಟೀ ಅಂಗಡಿ ದಿನಸಿ ಅಂಗಡಿ ಔಷಧಾಲಯ ಕ್ಲಿನಿಕ್ ಗಳು ಹಣ್ಣಿನ ಅಂಗಡಿ ದಿನ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟನ್ನು ನಡೆಸಿದ್ದಾರೆ .

Share This Article
Leave a comment