ಜೈನ ಮಠದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

Team Newsnap
1 Min Read

ಶ್ರವಣಬೆಳಗೊಳದ ಜೈನ ಮಠದ ಪೀಠಾಧ್ಯಕ್ಷ , ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶರಾದರು.

ಪಾಕೃತ, ಕನ್ನಡ ಮತ್ತು ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿದ್ದ ಭಟ್ಟಾರಕ ಶ್ರೀಗಳು (74) ಬೆಂಗಳೂರು ವಿ ವಿ ಯಲ್ಲಿ ತತ್ವ ಶಾಸ್ತ್ರದಲ್ಲಿ ಹಾಗೂ ಮೈಸೂರು ವಿವಿ ಯಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ಅನಾರೋಗ್ಯದಿಂದ ಬಳಲಿದ್ದ ಶ್ರೀಗಳಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

1949 ಮೇ 3 ರಂದು ಜನಿಸಿದ್ದ ಶ್ರೀಗಳು 1970 ರಲ್ಲಿ ಪೀಠಾಧಿಪತಿಗಳಾಗಿ ನೇಮಕ ಗೊಂಡರು ಅಲ್ಲದೇ ಇದುವರೆಗೂ
4 ಮಾಹಾ ಮಾಸ್ಥಕಾಭಿಷೇಕ ಮಾಡಿದ್ದಾರೆ.

Share This Article
Leave a comment