ಕೋಟಿ ಕಂಠಗಳಲ್ಲಿ ಕನ್ನಡದ ಗಾನ; ಸಿಎಂ ಬೊಮ್ಮಾಯಿ ಚಾಲನೆ : ವಿಮಾನದಲ್ಲೂ ಕನ್ನಡ ಗಾಯನ

Team Newsnap
1 Min Read
Kannada song in crores of voices; CM Bommai drive: Kannada singing in the plane too ಕೋಟಿ ಕಂಠಗಳಲ್ಲಿ ಕನ್ನಡದ ಗಾನ; ಸಿಎಂ ಬೊಮ್ಮಾಯಿ ಚಾಲನೆ : ವಿಮಾನದಲ್ಲೂ ಕನ್ನಡ ಗಾಯನ

ಜಗತ್ತಿನೆಲ್ಲೆಡೆ ಕನ್ನಡ ಹಾಡುಗಳದ್ದೇ ಕಂಪನ. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮ ಕಣ ಕಣದಲ್ಲೂ ಕಂಪನ ಸೃಷ್ಟಿಸಿದೆ.

WhatsApp Image 2022 10 28 at 12.38.03 PM

ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಅಭೂಪೂರ್ವ ಕಾರ್ಯಕ್ರಮ ಇಡೀ ನಾಡನ್ನು ಒಂದೇ ಸ್ವರದಡಿ ತಂದು ನಿಲ್ಲಿಸಿದೆ.

ವಿಧಾನಸೌಧದ ಮೆಟ್ಟಿನಿಂದ ಸರ್ಕಾರಿ ಶಾಲೆಯ ಹೊಸ್ತಿಲವರೆಗೆ , ಏರ್‌ ಪೋರ್ಟ್‌ ಅಂಗಳದಿಂದ ಸಾಗರದ ಅಲೆಗಳ ನಡುವಿನವರೆಗೆ ಎಲ್ಲೆಡೆ ಕನ್ನಡ ಗಾನ ಮೊಳಗಿತ್ತು. ಇದು ಕೋಟಿ ಕಂಠ ಗಾಯನವಾದರೂ ಈಗಾಗಲೇ 1.125 ಕೋಟಿ ಮಂದಿ ನೋಂದಣಿ ಮಾಡಿಕೊಂಡು ಹಾಡಿದ್ದಾರೆ.

ಕನ್ನಡಾಭಿಮಾನ ಮೆರೆದ ವಿಮಾನ ಸಿಬ್ಬಂದಿ, ಪ್ರಯಾಣಿಕರು!

67ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಆಯೋಜಿಸಿರುವ ‘ ಕೋಟಿ ಕಂಠ ಗಾಯನ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ ಆಕಾಶದಲ್ಲೂ ಗಾಯನ ಮೊಳಗಿದೆ.


ಇಂದು ಬೆಳಂ ಬೆಳಗ್ಗೆಯೇ ಸ್ಪೈಸ್ ಜೆಟ್ ನಲ್ಲಿ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು ‘ ಕೋಟಿ ಕಂಠ ಗಾಯನ’ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸುವ ಭಾಗವಾಗಿ ಒಟ್ಟಿಗೆ ಕನ್ನಡ ಹಾಡನ್ನು ಹಾಡಿದ್ದಾರೆ. ವರನಟ ಡಾ. ರಾಜ್ ಕುಮಾರ್ ಹಾಡಿರುವ ಡಾ. ಹಂಸಲೇಖ ರಚಿಸಿರುವ ಹುಟ್ಟಿದ್ದರೆ ಕನ್ನಡ ನಾಡಲ್ಲಿ ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು’ ಗೀತೆ ಹಾಡುವ ಮೂಲಕ ಕನ್ನಡ ಭಾಷೆಗೆ ನಮನ ಸಲ್ಲಿಸಲಾಯಿತು.

ಈ ವಿಡಿಯೋವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Share This Article
Leave a comment