
ಶರಣು ಸದ್ಗುರು ನಿನಗೆ
ಶರಣು ಶರಣಾರ್ಥಿ..!
ಹೊತ್ತಿಸೆನ್ನೆದೆಯೊಳಗೆ
ಪ್ರಜ್ಞೆಯ ಪ್ರಣತಿ..
ಸುತ್ತ ಮುತ್ತಿಹುದೆನಗೆ
ಕಾರಿರುಳು ಕಾಡು..!
ಹುಡುಕಬೇಕಿದೆ ನನಗೆ
ನಾನೆ ಹೊಸ ಜಾಡು..!
ನನ್ನ ಪಯಣಕೆ ನನದೆ
ಬೆಳಕಿರಲಿ ಸತತ..!
ಬೆಳಕೂರ ಗುರಿ ಬಿಡದೆ
ಸಾಗಲನವರತ..!
ಹಾವು ಏಣಿಯ ಆಟ
ಈ ಬದುಕ ತಿಳಿಸು..!
ಹಾವಿಗೆಟುಕದೆ ಏಣಿ
ಏರುವುದ ಕಲಿಸು..!
ಹೊಳೆಸೆನಗೆ ಈ ಪಾಡ
ಹಾಡುಗೊಳಿಸುವುದ..!
ಜಗಕೆ ಮಾಡದೆ ಕೇಡ
ನಗುತ ನಡೆಯುವುದ..!
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ