‘ಮಹಾ’ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿ ಅನೇಕ ಜನರನ್ನು ಹಾಗೂ ವಿವಾದಗಳನ್ನು ಮೈಮೇಲೆ ಹಾಕಿಕೊಂಡಿರುವ ಬಾಲಿವುಡ್ ನಟಿ ಕಂಗನಾ ಈಗ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಇಂದು ಉತ್ತರ ಪ್ರದೇಶದ ಹಸ್ರತ್ ಎಂಬ ಊರಲ್ಲಿ 19 ವರ್ಷದ ಹುಡುಗಿಯ ಮೇಲೆ ಗುಂಪು ಅತ್ಯಾಚಾರ ಮಾಡಿದೆ. ಈ ಸುದ್ದಿಯನ್ನು ಕೇಳಿದ ಕಂಗನಾ ರನಾವತ್ ಕೆಂಡಾಮಂಡಲವಾಗಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕಂಗನಾ ರನಾವತ್ ‘ಇಂತಹ ಅತ್ಯಾಚಾರಿಗಳನ್ನು ನಡುಬೀದಿಯಲ್ಲೇ ಗುಂಡಿಕ್ಕಿ ಸಾಯಿಸಬೇಕು. ಇಂತಹ ವರ್ತನೆ ತೋರುವವರನ್ನು ಕ್ಷಮಿಸಲೇಬಾರದು’ ಎಂದು ಹೇಳಿದ್ದಾರೆ.