ಮಂಡ್ಯದ ರಾಜಕಾರಣದ ತಿರುವಿಗೆ ನಿರ್ದೀಷ್ಟ ದಿಕ್ಕುಗಳೇ ಇಲ್ಲ. ದಿನವೂ ಬದಲಾವಣೆ . ಈಗ ಮತ್ತೊಂದು ಸ್ವರೂಪ. MLC ಮರಿತಿಬ್ಬೇಗೌಡ ಜೆಡಿಎಸ್ ಗುಡ್ ಬೈ ಹೇಳಿ, ಕಾಂಗ್ರೆಸ್ ಗೆ ಜೈ ಜೈ ಎಂದು ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ
ದಕ್ಷಿಣ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ ಪರ ಮರಿತಿಬ್ಬೇಗೌಡ ಪ್ರಚಾರ. ಮಾಡುವುದರ ಮೂಲಕ ಕಾಂಗ್ರೆಸ್ ಸೇರ್ತಾರಾ ಎಂಬುದು ಖಚಿತವಾಗಿದೆ.
ಮರಿತಿಬ್ಬೇಗೌಡರ ಆಪ್ತನಿಗೆ ಜೆಡಿಎಸ್ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ. ಜೆಡಿಎಸ್ ವಿರುದ್ದ ಅಸಮಾಧಾನಗೊಂಡಿದ್ದ ಮರಿತಿಬ್ಬೇಗೌಡರು ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಇತ್ತಿಚೆಗೆ ವಾಗ್ದಾಳಿ ನಡೆಸಿದ್ದರು
ಇದನ್ನು ಓದಿ:ಎಫ್ಬಿ ಗೆಳತಿಯಿಂದ ಮೋಸ: ವ್ಯಾಪಾರ ಪಾಲುದಾರಿಕೆ ನೆಪದಲ್ಲಿ 35 ಲಕ್ಷ ರು ಪಂಗನಾಮ
ಹಣವಿದ್ದವರಿಗೆ ಮಾತ್ರ ಜೆಡಿಎಸ್ ನಲ್ಲಿ ಟಿಕೆಟ್.ದೇವೇಗೌಡರ ಕುಟುಂಬ ರಾಜಕಾರಣದಿಂದ ಪಕ್ಷ ಹೀನಾಯ ಸ್ಥಿತಿಗೆ ಹೋಗಲು ಕಾರಣ.
ನನ್ನನ್ನ ಕಳೆದ ಚುನಾವಣೆಯಲ್ಲಿ ನಿಲ್ಲಿಸಿ ಸೋಲಿಸಲು ಮುಂದಾಗಿದ್ದರು ಎಂದು ಹೇಳುವ ಮೂಲಕ ಜೆಡಿಎಸ್ ವಿರುದ್ದ ಮರಿತಿಬ್ಬೇಗೌಡರುಕಿಡಿಕಾರಿದ್ದರು
ನಾನು ಈ ಬಾರಿ ಜೆಡಿಎಸ್ ಅಭ್ಯರ್ಥಿಗೆ ಯಾವುದೇ ಕಾರಣಕ್ಕು ಬೆಂಬಲ ಕೊಡಲ್ಲ.ನೀವು ಯಾರು ಜೆಡಿಎಸ್ ಅಭ್ಯರ್ಥಿ ಗೆ ವೋಟ್ ಹಾಕಬೇಡಿ ಎಂದು ಬೆಂಬಲಿಗರಿಗೆ ಕರೆ ನೀಡಿದ್ದರು
ಇದೀಗ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ. ಆರಂಭಿಸಿದ್ದಾರೆ ಮಂಡ್ಯದ ಖಾಸಗಿ ಭವನದಲ್ಲಿ ಬೆಂಬಲಿಗರ ಸಭೆ ಕರೆದು ಮಧು ಜಿ ಮಾದೇಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ
ಮಧು ಜಿ ಮಾದೇಗೌಡರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸುವಂತೆ ಮರಿತಿಬ್ಬೇಗೌಡರ ತೀರ್ಮಾನಕ್ಕೆ ಜೈ ಎಂದ ಬೆಂಬಲಿಗರು.
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ
- ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ