ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಜೈರಾಮ್ ರಮೇಶ್ ಟಿಕೆಟ್ : ನಾಯಕರಲ್ಲಿ ಅಸಮಾಧಾನ

Team Newsnap
1 Min Read

ರಾಜ್ಯಸಭೆಗೆ ಕಾಂಗ್ರೆಸ್ ಕೂಡ ಅಭ್ಯರ್ಥಿ ಘೋಷಿಸಿದೆ. ಕಾಂಗ್ರೆಸ್ ಪಕ್ಷದಿಂದ ಜೈರಾಮ್ ರಮೇಶ್ ಅವರಿಗೆ ರಾಜ್ಯಸಭೆಗೆ ಟಿಕೆಟ್ ನೀಡಲಾಗಿದೆ. ಜೈರಾಮ್ ರಮೇಶ್ ಟಿಕೆಟ್ ನೀಡಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಎಐಸಿಸಿಯಿಂದ ಪಟ್ಟಿ ಬಿಡುಗಡೆ:

ರಾಜ್ಯಸಭಾ 10 ಸ್ಥಾನಗಳಿಗೆ ಅಭ್ಯರ್ಥಿಯ ಪಟ್ಟಿ ಬಿಡುಗಡೆ ಮಾಡಿದೆ. ಛತ್ತೀಸ್ ಗಡ ರಾಜ್ಯಸಭಾ ಚುನಾವಣೆಗೆ ರಾಜೀವ್ ಶುಕ್ಲಾ, ರಂಜಿತ್ ರಾಜನ್ ಗೆ ಟಿಕೆಟ್ ನೀಡಿದೆ. ಹರಿಯಾಣದ ಒಂದು ಸ್ಥಾನಕ್ಕೆ ಅಜಯ್ ಮಕೇನ್ ಗೆ ಟಿಕೆಟ್ ನೀಡಿದೆ. ಕರ್ನಾಟಕದ ಒಂದು ರಾಜ್ಯಸಭಾ ಸ್ಥಾನಕ್ಕೆ ಜೈರಾಂ ರಮೇಶ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಇದನ್ನು ಓದಿ : ರಾಜ್ಯಸಭೆಗೆ ಟಿಕೆಟ್ ಸಿಕ್ಕಿರುವುದು ರಾಯರ ಕೃಪೆ, ಪವಾಡ – ಜಗ್ಗೇಶ್

ಇನ್ನೂ ಮಧ್ಯಪ್ರದೇಶ ವಿವೇಕ್ ಠಾಕೂರ್, ಮಹಾರಾಷ್ಟ್ರ – ಇಮ್ರಾನ್, ರಾಜಸ್ಥಾನದ ಮೂರು ಸ್ಥಾನಗಳಿಗೆ ರಣದೀವ್ ಸಿಂಗ್ ಸುರ್ಜೇವಾಲಾ, ಮುಖುಲ್ ವಾಷ್ನಿಕ್ ಹಾಗೂ ಪ್ರಮೋದ್ ತಿವಾರಿಗೆ ಟಿಕೆಟ್ ನೀಡಲಾಗಿದೆ. ತಮಿಳುನಾಡಿನ ಒಂದು ರಾಜ್ಯಸಭಾ ಕ್ಷೇತ್ರಕ್ಕೆ ಪಿ.ಚಿದಂಬರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

Share This Article
Leave a comment