ಅಕ್ರಮ ಆಸ್ತಿ ಸಂಪಾದನೆ : ಮಂಡ್ಯದಲ್ಲಿ ಆರ್ ಟಿ ಓ ಗುಮಾಸ್ತ ನ ಮೇಲೆ ಎಸಿಬಿ ದಾಳಿ

Team Newsnap
1 Min Read

ಅಕ್ರಮ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಆರ್ ಟಿ ಓ ಪ್ರಥಮ ದರ್ಜೆ ಸಹಾಯಕ ಎ.‌ ವಿ. ಚನ್ನವೀರಪ್ಪ ಎಂಬುವರ ಮಂಡ್ಯ ಮನೆ ಮೇಲೆ ದಾಳಿ, ಮಂಗಳವಾರ ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಮಂಡ್ಯ ಕುವೆಂಪುನಗರದ ಮನೆ ಹಾಗೂ ಸ್ವಗ್ರಾಮ ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಮನೆ ಮೇಲೂ ದಾಳಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ.

ಸಾರಿಗೆ ಇಲಾಖೆಯ ಬೆಂಗಳೂರಿನ ಆಯುಕ್ತ ಕಚೇರಿಯಲ್ಲಿ ಕರ್ತವ್ಯ ಎ. ವಿ. ಚನ್ನವೀರಪ್ಪ ನಿರ್ವಹಿಸುತ್ತಿದ್ದರು. ಈಗ ಮೈಸೂರಿನ ಆರ್ ಟಿ ಓ ಕಚೇರಿಯಲ್ಲಿ ಎಫ್. ಡಿ. ಎ ಕೆಲಸ ಮಾಡುತ್ತಿದ್ದಾರೆ.

ಎಸಿಬಿ ಎಸ್ಪಿ ಅರುಣಾ, ಡಿವೈಎಸ್ಪಿ ಧರ್ಮೇಂದ್ರ. ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

Share This Article
Leave a comment