ನಾನು ತಪ್ಪು ಮಾಡಿದ್ದೇನೆ ಅಂತ ಸಾಬೀತುಪಡಿಸಿದರೆ ವಿಧಾನಸೌಧ, ಹೈಕೋರ್ಟ್ ಮಧ್ಯದ ನಡು ರಸ್ತೆಯಲ್ಲಿ ತಲೆ ಕಡಿದುಕೊಳ್ಳುತ್ತೇನೆ ಎಂದು ನ್ಯಾ ವೀರಪ್ಪನವರು ತಮ್ಮ ಅಸಮಾಧಾನವನ್ನು ಹೊರಹಾಕಿದರು
ಬೆಂಗಳೂರು ವಕೀಲರ ಸಂಘದಿಂದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಇತ್ತೀಚೆಗೆ ನ್ಯಾಯಮೂರ್ತಿಗಳ ಮೇಲೆ ಬರುವ ಆರೋಪಗಳ ಬಗ್ಗೆ ಜಸ್ಟೀಸ್ ವೀರಪ್ಪ ನೋವಿನ ನುಡಿಯನ್ನು ಹೊರಹಾಕಿದರು.ಇದನ್ನು ಓದಿ –ನಾನು ಆರೋಗ್ಯವಾಗಿದ್ದೇನೆ :ಹಾಸ್ಯ ನಟ, ಮಂಡ್ಯದ ಚಿಕ್ಕಣ್ಣ ಸ್ಪಷ್ಟನೆ
ಕೆಲವು ವಕೀಲರು ಜಡ್ಜ್ಗಳ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುತ್ತಾರೆ. ಹಾಗೆಯೇ ನ್ಯಾಯಧೀಶರಿಗೆ ಒಂದು ಹಂತದ ಬಳಿಕ ಆಯ್ಕೆಯೇ ಇರುವುದಿಲ್ಲ. ಆಗ ನಾವು ಸುದರ್ಶನ ಚಕ್ರವನ್ನು ನ್ಯಾಯಾಧೀಶರು ಬಳಸಲೇಬೇಕಾಗುತ್ತದೆ ಎಂದರು.
ಆರೋಪಗಳು ಎಲ್ಲಾ ವಲಯದಲ್ಲೂ ಕೇಳಿ ಬರುತ್ತವೆ. ಅದೇ ರೀತಿ ನ್ಯಾಯಾಂಗದ ಮೇಲೂ ಬಂದಿರಬಹುದು. ಆದರೆ, ನ್ಯಾಯಮೂರ್ತಿ ವೀರಪ್ಪ ಅವರು ಆರೋಪ ಮಾಡಿರುವ ವಕೀಲರಿಗೆ ನಯವಾಗಿಯೇ ಬುದ್ಧಿ ಹೇಳಿದ್ದಾರೆ. ಜೊತೆಗೆ ತಾವೂ ಎಷ್ಟು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇವೆ ಎಂಬುದನ್ನೂ ಕೂಡ ತಮ್ಮ ಮಾತುಗಳ ಮೂಲಕ ಹೇಳಿದ್ದಾರೆ.
- ‘ವೈಸ್ ಅಡ್ಮಿರಲ್’ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ನೇಮಕ
- ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ
- ಕುಮಾರಸ್ವಾಮಿ ಗೆಲ್ಲಿಸಿ, ಕೇಂದ್ರ ಮಂತ್ರಿ ಸ್ಥಾನ ಸಾಧ್ಯತೆ : ಬಿಜೆಪಿ ಶಾಸಕ ಸುರೇಶ್ ಕುಮಾರ್
- ಮಂಡ್ಯದಲ್ಲಿ ಐಸ್ಕ್ರೀಂ ತಿಂದು ಅವಳಿ ಮಕ್ಕಳು ಸಾವು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ದೇವೇಗೌಡರಿಂದ ಡಿ ಸಿ ಎಂ ಡಿಕೆಶಿ ವಿರುದ್ಧ ಗಂಭೀರ ಆರೋಪ