ಪತಿ-ಪತ್ನಿ ಜಗಳ – ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ- ಮೂವರು ಸಾವು

Team Newsnap
0 Min Read

ಕೌಟುಂಬಿಕ ಕಲಹಕ್ಕೆ ಮನ ನೊಂದು ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ತಾಲೂಕಿನ ಉಪ್ಪಾರಹಳ್ಳಿಯ ತಾಂಡದಲ್ಲಿ ಜರುಗಿದೆ.

ಬುಜ್ಜಿ ಬಾಯಿ (35), ಖುಷಿ (9), ಹರ್ಷಿತ (6) ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿಗಳು.

ಪತಿ ವೆಂಕಟೇಶ್ ಹಾಗೂ ಬುಜ್ಜಿಬಾಯಿ ನಡುವೆ ಪ್ರತಿದಿನ ಗಲಾಟೆಯಾಗುತ್ತಿತ್ತು.
ನಿನ್ನೆ ರಾತ್ರಿ ವೆಂಕಟೇಶ್ ಕುಡಿದು ಬಂದು ಪತ್ನಿ ಬುಜ್ಜಿಬಾಯಿ ಜೊತೆ ಗಲಾಟೆ ಮಾಡಿದ್ದಾನೆ.

ಮನನೊಂದ ಬುಜ್ಜಿಬಾಯಿ ತನ್ನಿಬ್ಬರು ಮಕ್ಕಳ ಜೊತೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ತಿರುಮಣಿ ಪೊಲೀಸರು​ ಪ್ರಕರಣವನ್ನು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

Share This Article
Leave a comment