ಜಗದ ಜಂಜದವ ಕೆಡವಿಕೊಂಡಿಹೆ
ನನ್ನ ತಡಿಯಲ್ಲಿ
ನಿನ್ನಂತಾಗುವುದು ಹೇಗೆ?
ಸಾವು ನೋವುಗಳಿಗೆ
ಸದಾ ತಲ್ಲಣಿಸುವುದೀ ಮನ
ನಿನ್ನಂತೆ ಗಾಢವಾಗಲಿ ಹೇಗೆ?
ಸಾವಿರ ಸಾಸಿವೆಯು ಚಟಪಟ
ಸಂಸಾರದಲಿ ತೇಲು ಮುಳುಗಿ ಅತ್ತು ನಕ್ಕು
ನಿನ್ನಂತೆ ಮೌನಿಯಾಗಲಿ ಹೇಗೆ?
ಹಾರುವ ಹಕ್ಕಿಗಳೆಲ್ಲ
ಕಟ್ಟುವುದು ಗೂಡ ನನ್ನಲ್ಲೇ
ನಿನ್ನಂತೆ ಧ್ಯಾನಿಸಲಿ ಹೇಗೆ?
ನೋಡದೆ ಕಾಡದೆ ಬೀಡುಬಿಡದೆ
ಚಣಮಾತ್ರ ಅವತರಿಸು ನನ್ನೊಳಗೆ
ಬೋಧೀವೃಕ್ಷದ ಬೀಜ ಮೊಳಕೆಯಾಗಲಿ..
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
- ರೇವಣ್ಣ ರಿಲೀಸ್ : ಬಿಗ್ ರಿಲೀಪ್
- ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್