ಮುಂದಿನ 4 ತಿಂಗಳು ರಾಜ್ಯವನ್ನ ಕಾಡಲಿರುವ ರಣಬಿಸಿಲು

Team Newsnap
1 Min Read

ಬೆಂಗಳೂರು : ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ರಣಬಿಸಿಲು ಕಾಡಲಿದೆ ಎಂದು ಹವಾಮಾನ ಇಲಾಖೆ (Meterological Department) ಎಚ್ಚರಿಕೆ ನೀಡಿದೆ.

ಬೇಸಿಗೆ ಕಾಲ ಈಗಾಗಲೇ ಶುರವಾಗಲಿದ್ದು , ಈ ಬಾರಿ ವಾಡಿಕೆಗಿಂತ ಹೆಚ್ಚು ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಜನರನ್ನು ರಣಬಿಸಿಲು ಬರುವ ಮುಂದಿನ ನಾಲ್ಕು ತಿಂಗಳು ಕಾಡಲಿದೆ ಎಚ್ಚರಿಕೆ ನೀಡಿದೆ.

ಹವಾಮಾನ ವೈಪರೀತ್ಯ ಹಿನ್ನೆಲೆ ,ಎಂದಿಗಿಂತ ಮುನ್ನವೇ ಈ ಬಾರಿ ಬೇಸಿಗೆ ಬಿಸಿಲು ಆರಂಭವಾಗಲಿದೆ.

ತೇವಾಂಶ ಭರಿತ ಮೋಡಗಳ ಸೆಳೆತ ಮತ್ತು ಗಾಳಿ ವೇಗ ಇಲ್ಲದಿರುವುದರ ಪರಿಣಾಮ ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆಯಿಂದ ರಣಬಿಸಿಲು ಕಾಡಲಿದೆ ಎಂದು ತಿಳಿಸಲಾಗಿದೆ.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ಫೆಬ್ರವರಿಯಲ್ಲೇ 33-25 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಏರಿಕೆಯಾಗಿ ,ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಲಿದೆ.

Share This Article
Leave a comment