ವಾಹನ ಸವಾರರಿಗೆ ರಸ್ತೆ ಬಿಡದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್

Team Newsnap
1 Min Read

ಮೈಸೂರು: ಕಿಡಿಗೇಡಿಗಳು ಬೈಕ್ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದು ವಾಹನ ಸವಾರರಿಗೆ ರಸ್ತೆ ಬಿಡದೇ ತೊಂದರೆ ನೀಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ನಡೆದಿದೆ.

ಈ ಘಟನೆ ಹಾಸನ-ಮೈಸೂರು ಹೆದ್ದಾರಿಯಲ್ಲಿ ನಡೆದಿದ್ದು , ಒಂದು ಬೈಕ್ ನಲ್ಲಿ 2-3 ಜನರು ಕುಳಿತುಕೊಂಡು ನಡುರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ್ದಾರೆ.

ನಾಲ್ಕೈದು ಬೈಕ್ ಗಳಲ್ಲಿ ಮತ್ತೊಂದೆಡೆ ಬಂದ ಯುವಕರ ಗುಂಪು ವ್ಹೀಲಿಂಗ್ ಮಾಡುತ್ತಾ ಬೇರೆ ವಾಹನಗಳಿಗೆ ರಸ್ತೆ ಬಿಡದೇ ಕಾಟ ಕೊಟ್ಟಿದ್ದಾರೆ.

ಕಾರಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಯುವಕರ ವ್ಹೀಲಿಂ ಪುಂಡಾಟವನ್ನು ಸೆರೆ ಹಿಡಿದಿದ್ದಾರೆ .ಮುಂದಿನ 4 ತಿಂಗಳು ರಾಜ್ಯವನ್ನ ಕಾಡಲಿರುವ ರಣಬಿಸಿಲು

ಈ ರೀತಿ ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಪುಂದರು ಪ್ರತಿ ದಿನ ಸಮಸ್ಯೆಯನ್ನು ಉಂಟು , ಮಾಡುತ್ತಿದ್ದು ಜೀವ ಭಯದಲ್ಲಿ ಇತರ ವಾಹನ ಸವಾರರು ತೆರಳಬೇಕಾದ ಸ್ಥಿತಿ ಸೃಷ್ಠಿಯಾಗಿದೆ.

Share This Article
Leave a comment