ಮಂಡ್ಯದ ಸಾವಯವ ಕೃಷಿಕ ಹಾಡ್ಯ ಪುಟ್ಟಸ್ವಾಮಿ ನಿಧನ

Team Newsnap
0 Min Read

ಮಂಡ್ಯದ ಸಾವಯವ ಕೃಷಿಕ ತಾಲೂಕಿನ ಹಾಡ್ಯ ಗ್ರಾಮದ ಪುಟ್ಟಸ್ವಾಮಿ (67) ಅವರು ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾದರು.

ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವ ಪುಟ್ಟಸ್ವಾಮಿಗೌಡರು, ಸಾವಯವ ಗಾಣದ ಮಾಲೀಕರ ಸಂಘದ ಅಧ್ಯಕ್ಷರಾಗಿಯೂ ಸಕ್ರಿಯವಾಗಿ ಕೆಲಸ ಮಾಡಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ಮಂಗಳವಾರ ಬೆಳಗ್ಗೆ 10-30ಕ್ಕೆ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article
Leave a comment