ಶಿವಮೊಗ್ಗದಲ್ಲಿ ಹಿಂದೂ ಯುವಕನ ಹತ್ಯೆ: ಕಲ್ಲು ತೂರಾಟ-ವಾಹನಗಳಿಗೆ ಬೆಂಕಿ : ಶಾಲಾ ಕಾಲೇಜುಗಳಿಗೆ ರಜೆ

Team Newsnap
1 Min Read

ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ದುಷ್ಕಮಿ೯ಗಳ ಗುಂಪೊಂದು ಬಜರಂಗದಳ ಕಾರ್ಯಕತ೯ನೂ ಆಗಿರುವ ಹಿಂದೂ ಯವಕನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಳೆದ ರಾತ್ರಿ 8.50 ರ ವೇಳೆಗೆ ಸಂಭವಿಸಿದೆ.

ಭಾರತಿ ಕಾಲೋನಿಯ ಹಷ೯ (21) ಎಂಬ ಯುವಕನೇ ಕೊಲೆಯಾದವನು. ಹಳೇ ವೈಷಮ್ಯಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾದರೂ ಈ ಘಟನೆ ನಂತರ ಶಿವಮೊಗ್ಗ ನಗರವು ಭಾರಿ ಬಿಗುವಿನಿಂದ ಕೂಡಿದೆ.

ಈ ಘಟನೆ ಖಂಡಿಸಿ ಶಿವಮೊಗ್ಗ ದ ಕೆಲವು ಕಡೆ ಕಲ್ಲು ತೂರಾಟ ನಡೆಸಲಾಗಿದೆ. ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಗಲಾಟೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ನಗರದಲ್ಲಿ 144 ನೇ ಸೆಕ್ಷನ್ ಜಾರಿ ಮಾಡಲಾಗಿದೆ.

ನಗರದ ಎಲ್ಲೆಡೆ ಬಿಗಿ ಪೋಲೀಸ್ ಬಂದೋಬಸ್ತು ಹಾಕಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗಕ್ಕೆ ಈ ಬೆಳಿಗ್ಗೆ ಭೇಟಿ ನೀಡಿದರು. ಯುವಕನ ಶವ ನೋಡಲು ಶವಾಗಾರಕ್ಕೆ ಭೇಟಿ ನೀಡಿ ಯುವಕನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಈ ದುಷ್ಕ್ಯತ ಹಿಂದಿರುವ ಆರೋಪಿಗಳನ್ನು ಕೂಡಲೇ ಹೆಡಮುರಿ ಕಟ್ಟಿ ತರಲು ಪೋಲಿಸರು ಯೋಜನೆ ರೂಪಿಸಿದ್ದಾರೆ ಎಂದು ಸಚಿವ ಜ್ಞಾನೇಂದ್ರ ಹೇಳಿದರು.

Share This Article
Leave a comment