ಮದ್ದೂರು ಪುರಸಭೆ ಮುಖ್ಯಾಧಿಕಾರಿ, ಹೆಲ್ತ್ ಇನ್ಸ್ ಪೆಕ್ಟರ್ ಅಮಾನತ್ತು

Team Newsnap
0 Min Read

ಮದ್ದೂರು ಪುರಸಭೆ ಇಬ್ಬರು ಅಧಿಕಾರಿಗಳನ್ನು ಪೌರಾಡಳಿತ ಇಲಾಖೆ ನಿರ್ದೇಶಕರು ಅಮಾನತ್ತು ಮಾಡಿದ್ದಾರೆ.

ಮದ್ದೂರಿನಲ್ಲಿ ಪೌರ‌ ಕಾರ್ಮಿಕ ನಾರಾಯಣ್ ಗೆ ಕಿರುಕುಳ ನೀಡಿ ಆತ್ಮಹತ್ಯೆ ಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಮದ್ದೂರು ಪುರಸಭೆ ಅಧಿಕಾರಿಗಳನ್ನು ಪೌರಾಡಳಿತ ಇಲಾಖೆ ಅಮಾನತ್ತು ಮಾಡಿದೆ.

ಇಲಾಖೆ ನಿರ್ದೇಶಕಿ ಬಿ ಬಿ ಕಾವೇರಿ ಅಮಾನತ್ತು ಆದೇಶ ಹೊರಡಿಸಿದ್ದಾರೆ. ಮದ್ದೂರು ಪುರಸಭಾ ಮುಖ್ಯಾಧಿಕಾರಿ ಮುರುಗೇಶ್ ಹಾಗೂ ಸಹಾಯಕ ಆರೋಗ್ಯ ನಿರೀಕ್ಷ ಜಾಸ್ಮಿನ್ ಖಾನ್ ಅಮಾನತ್ತು ಆಗಿರುವ ಅಧಿಕಾರಿಗಳು.

ಅಧಿಕಾರಿಗಳ ಅಮಾನತ್ತಿನ ಅದೇಶದ ಪ್ರತಿ:

bb51ca28 818d 49e8 bc4a 4e18b4f8d9e5
2a18fb37 6ef8 4856 b396 b885123e834b

Share This Article
Leave a comment